ಪಾಲಕ್ಕಾಡ್: ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಕೇರಳ ಸರ್ಕಾರ ಹಲವು ಸೃಜನಾತ್ಮಕ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಗುರಿಯನ್ನೂ ನಿಗದಿಪಡಿಸಲಾಗಿದೆ. ಕೇರಳವನ್ನು ಜ್ಞಾನ ಸಮಾಜವನ್ನಾಗಿ ಮಾಡುವ ಚಟುವಟಿಕೆಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಳ್ಳುವ ಯಾವುದೇ ಕ್ರಮಗಳು ಸಮಗ್ರ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಆಧರಿಸಿರಬೇಕು ಎಂದು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು(ವಿಜ್ಞಾನ ಸಾಹಿತ್ಯ) ಹೇಳಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಲಾಗಿದೆ.
ಭಾರತದ ಸಂವಿಧಾನದ 21-ಎ ಪ್ರಕಾರ, ಆರರಿಂದ ಹದಿನಾಲ್ಕು ವರ್ಷಗಳವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವು ಮಗುವಿನ ಮೂಲಭೂತ ಹಕ್ಕು. ಅಂದರೆ, ಸಂವಿಧಾನವು ಒಂದನೇ ತರಗತಿಯಲ್ಲಿ ಆರನೇ ವಯಸ್ಸಿನಲ್ಲಿ ಶಿಕ್ಷಣವನ್ನು ಕಲ್ಪಿಸುತ್ತದೆ.2009 ರ ಶಿಕ್ಷಣ ಹಕ್ಕು ಕಾಯಿದೆಯು ಆರನೇ ವಯಸ್ಸಿನಿಂದ ಔಪಚಾರಿಕ ಶಿಕ್ಷಣವನ್ನು ಸಹ ಸೂಚಿಸುತ್ತದೆ. ಕೊಠಾರಿ ಆಯೋಗದ ನಂತರದ ಎಲ್ಲಾ ತಜ್ಞರ ಸಮಿತಿಗಳು ಆರರಿಂದ ಹದಿನಾಲ್ಕು ವರ್ಷ ವಯಸ್ಸಿನವರೆಗೆ ಶಾಲಾ ಶಿಕ್ಷಣವನ್ನು ಶಿಫಾರಸು ಮಾಡಿದೆ.
ಪ್ರಪಂಚದ ಬಹುಪಾಲು ದೇಶಗಳಲ್ಲಿ, ಒಂದನೇ ತರಗತಿ ಪ್ರವೇಶ ವಯಸ್ಸು ಆರು ಅಥವಾ ಏಳು ವರ್ಷಗಳು. ಶಿಕ್ಷಣದ ಗುಣಮಟ್ಟದಲ್ಲಿ ಮುನ್ನಡೆಯುತ್ತಿರುವ ದೇಶಗಳಲ್ಲಿ, ಇದು ಏಳು ವರ್ಷಗಳವರೆಗೂ ಇದೆ. ಅಂದರೆ ಪ್ರವೇಶ ವಯೋಮಿತಿಯನ್ನು ಹೆಚ್ಚಿಸುವುದು ಶಿಕ್ಷಣದ ಗುಣಮಟ್ಟಕ್ಕೆ ನೆರವಾಗುವ ಅಂಶವಾಗಿದೆ.ಶಿಕ್ಷಣ ಇಲಾಖೆಯು ಪಠ್ಯಕ್ರಮ ಮತ್ತು ಗುಣಮಟ್ಟವನ್ನು ವಿಶ್ಲೇಷಿಸಲು ಸಿದ್ಧತೆ ನಡೆಸಬೇಕು ಎಂದು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ರಮೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಜೋಜಿ ಕೂಟುಮೇಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಶಾಲಾ ಪ್ರವೇಶ ವಯಸ್ಸು; ನಿರ್ಧಾರ ವೈಜ್ಞಾನಿಕವಾಗಿರಬೇಕು : ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು
0
April 06, 2023