ಕಲ್ಪೆಟ್ಟಾ: ವಯನಾಡ್ನಲ್ಲಿರುವ ಸಂಸದ ರಾಹುಲ್ ಗಾಂಧಿಯವರ ಕಚೇರಿಯ ದೂರವಾಣಿ ಮತ್ತು ಇಂಟರ್ನೆಟ್ ಸಂಪರ್ಕವನ್ನು ಬಿ.ಎಸ್.ಎನ್.ಎಲ್. ಕಡಿತಗೊಳಿಸಿದೆ.
ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್ಎನ್ಎಲ್ ಮಾಹಿತಿ ನೀಡಿದೆ. ಇದೇ ತಿಂಗಳ 11ರಂದು ರಾಹುಲ್ ವಯನಾಡಿಗೆ ಬರಲಿದ್ದಾರೆ.
ಏತನ್ಮಧ್ಯೆ, ರಾಹುಲ್ ವಯನಾಡಿನ ಜನರಿಗೆ ಬರೆದ ಪತ್ರವನ್ನು ಅವರ ಮನೆಗಳಲ್ಲಿ ಹಂಚಲು ಪ್ರಾರಂಭಿಸಲಾಗಿದೆ. ಐದು ದಿನಗಳಲ್ಲಿ ಕ್ಷೇತ್ರದ ಎಲ್ಲ ಮನೆಗಳಿಗೂ ಪತ್ರ ತಲುಪಿಸಲು ಯುಡಿಎಫ್ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ. ಒಗ್ಗಟ್ಟಿನಿಂದ ಎಲ್ಲ ಬಿಕ್ಕಟ್ಟುಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು ಎಂದು ಪತ್ರದಲ್ಲಿ ರಾಹುಲ್ ಹೇಳಿದ್ದಾರೆ.
ವಯನಾಡ್ ಸಂಸದ ರಾಹುಲ್ ಗಾಂಧಿಯವರ ಕಚೇರಿಯ ಸಂಪರ್ಕ ವಿಚ್ಚೇದಿಸಿದ ಬಿ.ಎಸ್.ಎನ್.ಎಲ್.
0
April 06, 2023