HEALTH TIPS

ಮೊಘಲರ ಬಗೆಗಿನ ಭಾಗಗಳನ್ನು ಬದಲಾಯಿಸುವುದು ಇತಿಹಾಸದ ನಿರಾಕರಣೆ: ಕೇಂದ್ರದ ಕ್ರಮವನ್ನು ಕೇರಳ ಒಪ್ಪುವುದಿಲ್ಲ: ವಿ ಶಿವನ್‍ಕುಟ್ಟಿ


              ತಿರುವನಂತಪುರ: ಪಠ್ಯಪುಸ್ತಕಗಳಲ್ಲಿ ತಿರುಚಿದ ಇತಿಹಾಸವನ್ನು ಪ್ರಸ್ತುತಪಡಿಸುವ ಕೇಂದ್ರದ ಕ್ರಮವನ್ನು ಕೇರಳ ಒಪ್ಪುವುದಿಲ್ಲ ಎಂದು ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಹೇಳಿದ್ದಾರೆ.
           ಶಿಕ್ಷಣದ ವಿರುದ್ಧ ಸಂಕುಚಿತ ರಾಜಕೀಯ ಒಲವನ್ನು ಹೊಂದಿರುವ ಪಠ್ಯಪುಸ್ತಕಗಳ ನಿರ್ಮಾಣವನ್ನು ಶೈಕ್ಷಣಿಕವಾಗಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ಶಿವನ್‍ಕುಟ್ಟಿ ಹೇಳಿದರು.
             6ನೇ ತರಗತಿಯಿಂದ 12ನೇ ತರಗತಿವರೆಗಿನ ಮಕ್ಕಳ ಪಠ್ಯಪುಸ್ತಕಗಳಲ್ಲಿ ಎನ್‍ಸಿಇಆರ್‍ಟಿ ಮಾಡಿರುವ ಬದಲಾವಣೆಗಳ ಸುದ್ದಿಯನ್ನು ಗಮನಿಸಿರುವೆ.  ಸತ್ಯಗಳಿಗೆ ನ್ಯಾಯ ಕೊಡದ ಪಠ್ಯಪುಸ್ತಕವನ್ನು ಮಾಡುವುದು ಇತಿಹಾಸವನ್ನು ನಿರಾಕರಿಸುವುದು, ಸಮ್ಮತವಲ್ಲ. ಕೇರಳ ಯಾವುದೇ ರೀತಿಯ ಸಹಕಾರ ನೀಡುವುದಿಲ್ಲ ಎಂದಿರುವರು.
            ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಶೈಕ್ಷಣಿಕ ವಿಷಯಗಳಲ್ಲೂ ವರ್ಗೀಕರಣಕ್ಕೆ ಕಾರಣವಾಗಲಿದೆ ಎಂದು ನೀತಿಯ ರಚನೆಯ ಸಂದರ್ಭದಲ್ಲಿ ಕೇರಳವು ಮಧ್ಯಸ್ಥಗಾರರಿಗೆ ತಿಳಿಸಿತ್ತು. ಕೇರಳ ವ್ಯಕ್ತಪಡಿಸಿದ ಭಿನ್ನಾಭಿಪ್ರಾಯಗಳು ಹಾಗೆಯೇ ಉಳಿದಿವೆ.
            ಶಿಕ್ಷಣವು ಏಕಕಾಲಿಕ ಪಟ್ಟಿಯಲ್ಲಿದೆ. ಕೇಂದ್ರೀಕರಣದ ಪ್ರಸ್ತಾಪಗಳ ಬಗ್ಗೆ ಕೇರಳ ಚಿಂತಿಸುತ್ತಿದೆ. ರಾಷ್ಟ್ರೀಯ ನೀತಿಯನ್ನು ಯಥಾಸ್ಥಿತಿಯಲ್ಲಿ ಜಾರಿಗೆ ತರಲು ಕೇರಳಕ್ಕೆ ಸಹಜವಾಗಿಯೇ ತೊಂದರೆಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಹಂತ ಬಂದಾಗ, ನಾವು ಪ್ರತಿ ಸಮಸ್ಯೆಯ ಆಧಾರದ ಮೇಲೆ ಆ ಹಂತದಲ್ಲಿ ಮಾತ್ರ ಪ್ರತಿಕ್ರಿಯಿಸಬಹುದು ಎಂದು ಸಚಿವರು ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries