ಬದಿಯಡ್ಕ: 2022-23ನೆಯ ಸಾಲಿನ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಗ್ರೇಸ್ ಮಾರ್ಕ್ ಇಲ್ಲದೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. 11 ಮಂದಿವಿದ್ಯಾರ್ಥಿಗಳು ಎಲ್ಲಾ ಹತ್ತು ವಿಷಯಗಳಲ್ಲೂ ಎ ಪ್ಲಸ್ ಅಂಕ ಹಾಗೂ 3 ವಿದ್ಯಾರ್ಥಿಗಳು 9 ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುತ್ತಾರೆ. ಶಾಲೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ವಿದ್ಯಾರ್ಥಿಗಳಾದ ಅಭಯ ಶರ್ಮ ಪಿ, ಅಮೋಘ ಕೃಷ್ಣ ಬಿ, ಭರತ್ ಕೃಷ್ಣ ಕೆ ಎಸ್, ಶ್ರೀನಿಧಿ ಎಸ್, ಶ್ರೀವತ್ಸ ಕೆ , ಸುಹಾನ್ ಎನ್ ಶೆಟ್ಟಿ, ಸುಧನ್ವ ಪರಮೇಶ್ವರ ಭಟ್ ಪಿ, ಸುಹಾಸ್ ಬಿ ಜಿ, ಸ್ಮೃತಿಮಾಲಾ, ಸ್ಕಂದ ಶರ್ಮ ಜೆ ಕೆ ಹಾಗೂ ದ್ರಿಷಿಕಾ ರೈ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಅಂಕ ಪಡೆದಿರುತ್ತಾರೆ. ಶ್ರೀಚಕ್ರಪಾಣಿ, ಶ್ರೀನಿಧಿ ಎನ್, ಅಂಜನಾ ಎಸ್. ಬಾಲನ್ 9 ವಿಷಯಗಳಲ್ಲಿ ಎಪ್ಲಸ್ ಪಡೆದಿರುತ್ತಾರೆ.