ಲಖನೌ: ಉತ್ತರ ಪ್ರದೇಶದ ಐತಿಹಾಸಿಕ ಜಾಮಾ ಮಸೀದಿಯ ಮೆಟ್ಟಿಲುಗಳ ಕೆಳಗೆ ಕೃಷ್ಣನ ವಿಗ್ರಹಗಳನ್ನು ಹೂತಿಡಲಾಗಿದೆ ಎಂದು ಕೃಷ್ಣ ಜನ್ಮಭೂಮಿ ಸಂರಕ್ಷಿತ್ ಸೇವಾ ಟ್ರಸ್ಟ್ ಆರೋಪಿಸಿದೆ. ವಿಗ್ರಹ ಪತ್ತೆಗೆ ಉತ್ಖನನ ನಡೆಸುವಂತೆ ಕೋರಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ಸಂಬಂಧ ಇಂತಿಜಾಮಿಯಾ, ಶಾಹಿ ಮಸೀದಿ ಮತ್ತು ಉತ್ತರ ಪ್ರದೇಶ ಕೇಂದ್ರೀಯ ವಕ್ಫ್ ಬೋರ್ಡ್ಗೆ ನೋಟಿಸ್ ಕಳುಹಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಮೇ 31ರಂದು ನಡೆಸುವುದಾಗಿ ಕೋರ್ಟ್ ತಿಳಿಸಿದೆ.
ಮೊಘಲ್ ದೊರೆ ಔರಂಗಜೇಬ ಶ್ರೀಕೃಷ್ಣ ಜನ್ಮಭೂಮಿ ದೇಗುಲ ಧ್ವಂಸದ ನಂತರ ಮಥುರಾದಿಂದ ಕೃಷ್ಣನ ವಿಗ್ರಹಗಳನ್ನು ತಂದು ಜಾಮಾ ಮಸೀದಿಯ ಮೆಟ್ಟಿಲುಗಳಲ್ಲಿ ಹೂತಿದ್ದ ಎಂದು ಹಿಂದೂ ಸಂಘಟನೆ ಆರೋಪಿಸಿದೆ.