ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ 11ನೇ ವಾರ್ಡ್ ನಲ್ಲಿ ಕುಕ್ಕಿಲ- ಚಂಬ್ರಕಾನ ಕುಡಿನೀರು ಯೋಜನೆಯ ಉದ್ಘಾಟನೆ ಇಂದು(ಮೇ 21) ಬೆಳಗ್ಗೆ 10 ಕ್ಕೆ ಜರಗಲಿದೆ.ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆಎಸ್ ಉದ್ಘಾಟಿಸುವರು. ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಅಧ್ಯಕ್ಷತೆವಹಿಸುವರು.ಈ ಸಂದರ್ಭದಲ್ಲಿ ಕುಡಿನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತಿಗೆ ಉಚಿತ ಸ್ಥಳದಾನಗೈದ ಮೊಹಮ್ಮದ್ ಯೂಸುಫ್ ಚಂಬ್ರಕಾನ ಅವರನ್ನು ಫಲಾನುಭವಿಗಳ ಪರವಾಗಿ ಸನ್ಮಾನಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.