ಮುಳ್ಳೇರಿಯ: ಪಯಸ್ವಿನಿ ನದಿಯಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಆಗ್ರಹಿಸಿ ಕಾರಡ್ಕ ಬ್ಲಾಕ್ ಪಂಚಾಯಿತಿ ನಿರ್ಣಯ ಮಂಡಿಸಿತು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅವರು ಪಯಸ್ವಿನಿ ನದಿಯಲ್ಲಿ ಬ್ಯಾರೇಜ್ಗಳನ್ನು ನಿರ್ಮಿಸಲು ಸರಕಾರಕ್ಕೆ ಮನವಿ ಸಲ್ಲಿಸುವ ಠರಾವು ಮಂಡಿಸಿದ್ದು, ಬ್ಲಾಕ್ ಪಂಚಾಯಿತಿ ವಿಭಾಗದ ಸದಸ್ಯ ಎಂ.ಕುಞಂಬು ನಂಬಿಯಾರ್ ಅನುಮೋದಿಸಿದರು. ಈ ಬಗ್ಗೆ ಬ್ಲಾಕ್ ಪಂಚಾಯಿತಿಯ ರೆಸಲ್ಯೂಶನ್ ಸಮಿತಿಯು ವಿವರವಾಗಿ ಚರ್ಚಿಸಿತು.
ಕರ್ನಾಟಕದಲ್ಲಿ ಹುಟ್ಟುವ ಪಯಸ್ವಿನಿ ನದಿಯು ಕಾಸರಗೋಡು ತಾಲೂಕಿನ ಬಹುತೇಕ ಪಂಚಾಯತ್ಗಳಿಗೆ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗೆ ಆಶ್ರಯವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹರಿಯುತ್ತಿರುವ ಪಯಸ್ವಿನಿ ಜೀವವೈವಿಧ್ಯದ ಜಲಾಶಯವೂ ಆಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಭೀಕರ ಬರಗಾಲ ನದಿಯಲ್ಲಿನ ಜೀವಜಾಲಗಳಿಗೆ ನಿತ್ಯ ಹಸಿರಿನಿಂದ ಕೂಡಿದ ಈ ಪ್ರದೇಶಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. 5 ವರ್ಷಗಳ ಹಿಂದೆ ಭೀಕರವಾಗಿ ಕಾಡಿದ ಬರಗಾಲದಿಂದ ನದಿಯಲ್ಲಿ ನೀರು ಬತ್ತಿ, ನದಿ ಹರಿಯುವ ಕಾನತ್ತೂರಿನ ನೆಯ್ಯಂಗಯದಲ್ಲಿ ಅಪರೂಪದ ಸಸ್ಯ ಸಂಕುಲ, ಹಲವು ಜಾತಿಯ ಮೀನು ಹಗೂ ಇತರ ಜಲಚರಗಳು ನಾಶವಾಗಿವೆ. ಕರ್ನಾಟಕದಿಂದ ಆರಂಭಗೊಳ್ಳುವ ಪಯಸ್ವಿನಿ ನದಿಗೆ ಕೇರಳ-ಕರ್ನಾಟಕ ಗಡಿ ಬಳಿ ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಇಲ್ಲಿ ನೀರು ದಾಸ್ತಾನುಗೊಳಿಸುವುದರಿಂದ ಕಾರಡ್ಕ ಬ್ಲಾಕ್ ಒಳಗೊಂಡಿರುವ ಕಾಸರಗೋಡು ತಾಲೂಕಿನ ಜನತೆಗೆ ಮತ್ತು ಜೀವವೈವಿಧ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ. ಅಪರೂಪದ ಜಾತಿಯ ಪ್ರಾಣಿಗಳು, ಸಸ್ಯಗಳು ಮತ್ತು ಮೀನುಗಳ ಸಂರಕ್ಷಣೆಗಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಒಳಪಡಿಸಿ ದೇಲಂಬಾಡಿ ಪಂಚಾಯಿತಿ ವ್ಯಾಪ್ತಿಯ ಪರಪ್ಪದಿಂದ ಪ್ರತಿ 5 ಕಿ.ಮೀ.ಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕಿರು ಅಣೆಕಟ್ಟುಗಳನ್ನು ನಿರ್ಮಿಸಿ ಸಂರಕ್ಷಿತ ಅರಣ್ಯ ಪ್ರದೇಶ ಒಳಗೊಂಡಿರುವ ಈ ಪ್ರದೇಶದ ಜೈವಿಕ ಸಂಪತ್ತನ್ನು ರಕ್ಷಿಸುವಂತೆ ಸಭೆ ಆಗ್ರಹಿಸಿದೆ.




.jpeg)
