ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಮತ್ತು ಕುಟುಂಬದವರು ಬಡಜನತೆಗೆ ನೀಡುವ ವಿವಿಧ ಸೇವಾಕಾರ್ಯಗಳನ್ನು ಫಲಾನುಭವಿಗಳಿಗೆ ನೀಡುವ ಕಾರ್ಯಕ್ರಮ ಕಿಳಿಂಗಾರಿನಲ್ಲಿ ಬುಧವಾರ ನಡೆಯಿತು.
ಮಾತೃಶ್ರೀ ಶಾರದಾ ಸಾಯಿರಾಂ ಭಟ್ ಅವರು ಉದ್ಘಾಟಿಸಿದರು. ಭವಾನಿ ಶಂಕರಿ ಉಳಿಯ ಅವರ ಮನೆದುರಸ್ತಿಗೆ ರೂಪಾಯಿ ಮೂವತ್ತು ಸಾವಿರ ಧನಸಹಾಯ, ಪೆರಿಯಡ್ಕದಲ್ಲಿ ಮೋಟಾರು ಮತ್ತು ಪೈಪ್ ಲೈನ್ಗಾಗಿ ಮೂವತ್ತುಸಾವಿರ ರೂ. ಧನಸಹಾಯ ವಿತರಿಸಲಾಯಿತು. ಔಷಧೀಯ ಸಹಾಯವಾಗಿ ಕುಮಾರಮಂಗಲದ ಸುಧಾ ಹಾಗೂ ದೇವಕಿ ಮಜಿರ್ಪಳ್ಳಕಟ್ಟೆ ಅವರಿಗೆ ತಲಾ ಹತ್ತುಸಾವಿರ ಧನಸಹಾಯ ನೀಡಲಾಯಿತು. ಗೀತಾ ಕೃಷ್ಣ ರೈ ಇಚ್ಲಂಪಾಡಿ, ಪ್ರೀತ ಬಾಲಗಿರಿ ಕಿಳಿಂಗಾರು, ಸಂಧ್ಯಾ ದರ್ಬೆತ್ತಡ್ಕ, ಪವಿತ್ರ ಬೆದ್ರಡ್ಕ ಬೇಳ ಇವರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಾಯಿರಾಂ ಕೃಷ್ಣ ಭಟ್, ವೇಣುಗೋಪಾಲ, ಸಂಜೀವ ರೈ, ಶೀಲಾ ಕೆ.ಎನ್.ಭಟ್, ಮಧುರಾ ಕೆ.ಎಸ್., ವಿನಯ ಕುಮಾರ್ ಜೊತೆಗಿದ್ದರು.
ಮನವಿ:
ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.
CANARA BANK
BADIYADKA BRANCH
A/c NUMBER: 0611101029775
IFSC: CNRB0004489