ವಾರಾಣಸಿ: ಜ್ಞಾನವಾಪಿ-ಶೃಂಗಾರ ಗೌರಿ ವಿವಾದಕ್ಕೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ಹಾಕಿದ್ದ ಅರ್ಜಿಗಳನ್ನು ವಾಪಾಸು ಪಡೆಯುವುದಾಗಿ ಮುಖ್ಯ ಅರ್ಜಿದಾರ ಜಿತೇಂದ್ರ ಸಿಂಗ್ ವಿಸೇನ್ ಅವರು ಘೋಷಿಸಿದ್ದಾರೆ.
ವಾರಾಣಸಿ: ಜ್ಞಾನವಾಪಿ-ಶೃಂಗಾರ ಗೌರಿ ವಿವಾದಕ್ಕೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ಹಾಕಿದ್ದ ಅರ್ಜಿಗಳನ್ನು ವಾಪಾಸು ಪಡೆಯುವುದಾಗಿ ಮುಖ್ಯ ಅರ್ಜಿದಾರ ಜಿತೇಂದ್ರ ಸಿಂಗ್ ವಿಸೇನ್ ಅವರು ಘೋಷಿಸಿದ್ದಾರೆ.
ವಿಶ್ವ ವೇದಿಕ್ ಸಂಸ್ಥಾನದ ಮುಖ್ಯಸ್ಥ ಜಿತೇಂದ್ರ ಸಿಂಗ್ ವಿಸೇನ್ ಅವರು ಶನಿವಾರ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
'ಹಿಂದೂ ಪರವಾಗಿ ಇರುವವರೂ ನನಗೆ ಹಿಂಸೆ ನೀಡುತ್ತಿದ್ದಾರೆ. ಜೊತೆಗೆ ಇನ್ನೂ ಹಲವರಿಂದ ಹಿಂಸೆ ಆಗುತ್ತಿದೆ. ಆದ್ದರಿಂದ ನಾನು ಹಾಗೂ ನನ್ನ ಕುಟುಂಬದವರು (ಪತ್ನಿ ಕಿರಣ್ ಸಿಂಗ್ ಮತ್ತು ಸೊಸೆ ರಾಖಿ ಸಿಂಗ್) ಈ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇವೆ' ಎಂದು ವಿಸೇನ್ ಅವರು ಹೇಳಿದ್ದಾರೆ.
'ದೇಶ ಹಾಗೂ ಧರ್ಮದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಹಿಂಸೆಯನ್ನು ತಾಳಿಕೊಳ್ಳುವ ಶಕ್ತಿ ಮತ್ತು ಸಂಪನ್ಮೂಲ ನಮ್ಮ ಬಳಿ ಇಲ್ಲ. 'ಧರ್ಮ'ಕ್ಕಾಗಿ ಹೋರಾಡುವ ಶಕ್ತಿ ಇನ್ನು ಉಳಿದಿಲ್ಲ' ಎಂದು ವಿಸೇನ್ ಹೇಳಿದ್ದಾರೆ.