HEALTH TIPS

ರೈಲು ಅಫಘಾತಕ್ಕೆ ಕೋಮು ಬಣ್ಣ ಬಳಿಯದಂತೆ ಒಡಿಶಾ ಪೊಲೀಸರಿಂದ ಎಚ್ಚರಿಕೆ

               ಭುವನೇಶ್ವರ: ಬಾಲಸೋರ್‌ ರೈಲು ಅಪಘಾತಕ್ಕೆ ಕೋಮು ಬಣ್ಣ ಬಳಿಯದಂತೆ ಒಡಿಶಾ ಪೊಲೀಸರು ಸಮಾಜದ ಎಲ್ಲಾ ವರ್ಗಗಳಿಗೂ ಭಾನುವಾರ ಮನವಿ ಮಾಡಿದ್ದಾರೆ.

               ಈ ಕುರಿತು ಟ್ವೀಟ್‌ ಮಾಡಿದರು ಒಡಿಶಾ ಪೊಲೀಸ್‌, 'ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಾಲಸೋರ್‌ ರೈಲು ದುರಂತಕ್ಕೆ ಕೋಮು ಬಣ್ಣ ಬಳಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಇದು ಅತ್ಯಂತ ದುರದೃಷ್ಟಕರ. ಈ ರೀತಿಯ ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಮಾಡದಂತೆ ಮನವಿ ಮಾಡುತ್ತೇವೆ. ಅಪಘಾತದ ಕುರಿತು ವದಂತಿಗಳನ್ನು ಹಬ್ಬಿಸಿ ಕೋಮು ಸೌಹಾರ್ದ ಹಾಳುಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದೆ.

                    ಅಪಘಾತ ನಡೆದಿರುವ ಸ್ಥಳದಲ್ಲಿಯ ವಿನ್ಯಾಸವೊಂದನ್ನು ನಿರ್ದಿಷ್ಟ ಸಮುದಾಯದ ಜೊತೆ ತಳುಕುಹಾಕಿ ಮಾಡಲಾಗಿರುವ ಪೋಸ್ಟ್‌ಗಳೂ ಈ ಆಕ್ಷೇಪಾರ್ಹ ಪೋಸ್ಟ್‌ಗಳಲ್ಲಿ ಸೇರಿವೆ. ಇದಕ್ಕೆ ಹಲವರಿಂದ ಖಂಡನೆ ವ್ಯಕ್ತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries