HEALTH TIPS

ನೂಹ್‌: ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ- ಬ್ಯಾಂಕ್‌, ಶಿಕ್ಷಣ ಸಂಸ್ಥೆ ಬಂದ್‌

             ನೂಹ್‌: ಹರಿಯಾಣದ ನೂಹ್‌ನಲ್ಲಿ ಸಮುದಾಯಗಳ ನಡುವಿನ ಘರ್ಷಣೆಯಿಂದ ಜುಲೈನಲ್ಲಿ ಅರ್ಧಕ್ಕೆ ನಿಂತಿದ್ದ 'ಬ್ರಿಜ್‌ ಮಂಡಲ್‌ ಶೋಭಾ ಯಾತ್ರೆ'ಯನ್ನು ಸೋಮವಾರ (ಆಗಸ್ಟ್‌ 28) ನಡೆಸುವುದಾಗಿ ಸರ್ವ ಜಾತೀಯ ಹಿಂದೂ ಮಹಾಪಂಚಾಯತ್‌ ಹೇಳಿದೆ.

              ಅಧಿಕಾರಿಗಳು ಅನುಮತಿ ನೀಡದಿದ್ದರೂ ಮೆರವಣಿಗೆ ನಡೆಸಲು ಹಿಂದೂ ಪರಿಷತ್‌ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನೂಹ್‌ ಸೇರಿ ಹಲವು ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ.

               ಸೆಪ್ಟೆಂಬರ್‌ 3 ರಿಂದ 7ರವರೆಗೆ ನೂಹ್‌ನಲ್ಲಿ ಜಿ20 ಶೆರ್ಪಾ ಗುಂಪುಗಳ ಸಭೆ ಇರುವ ಹಿನ್ನೆಲೆಯಲ್ಲಿ ಯಾತ್ರೆ ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ಹರಿಯಾಣ ಪೊಲೀಸ್‌ ಮಹಾನಿರ್ದೇಶಕ ಶತ್ರುಜಿತ್‌ ಕಪೂರ್‌ ತಿಳಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಬಿಗಿ ಬಂದೋಬಸ್ತ್‌

ಅರೆಸೇನಾ ಪಡೆ ಮತ್ತು ಭದ್ರತಾ ಸಿಬ್ಬಂದಿಗೆ ರಾಜ್ಯದ ಒಳಗೆ ಮತ್ತು ಜಿಲ್ಲೆಗಳ ಗಡಿಗಳಲ್ಲಿ ಹದ್ದಿನಕಣ್ಣಿಡಲು ಸೂಚನೆ ನೀಡಲಾಗಿದೆ. ಆಗಸ್ಟ್‌ 26 ರಿಂದ 28ರವರೆಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

               ಭದ್ರತೆಗಾಗಿ ನೂಹ್‌ನಲ್ಲಿ 1,900 ಹರಿಯಾಣ ಪೊಲೀಸ್‌ ಸಿಬ್ಬಂದಿ, 24 ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ದಾರಿಗಳನ್ನು ಬಂದ್‌ ಮಾಡಲಾಗಿದ್ದು, ಹೊರಗಿನಿಂದ ಯಾರೂ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ದೇವಸ್ಥಾನಗಳನ್ನು ಬಂದ್‌ ಮಾಡಲಾಗಿದೆ ಎಂದು ಪೊಲೀಸ್‌ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

                ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತದಿಂದ ಶಿಕ್ಷಣ ಸಂಸ್ಥೆ, ಬ್ಯಾಂಕ್‌ಗಳನ್ನು ಬಂದ್‌ ಮಾಡಲಾಗಿದ್ದು, ಎಸ್‌ಎಂಎಸ್‌ ಸೇವೆಗಳನ್ನೂ ನಿರ್ಬಂಧಿಸಿದೆ. ಸೆಕ್ಷನ್‌ 144 ಅಡಿಯಲ್ಲಿ ನಿಷೇಧಾಜ್ಞೆಯನ್ನೂ ಹೇರಲಾಗಿದ್ದು ನಾಲ್ಕು ಅಥವಾ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries