ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯ ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮ ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯ ಅಧ್ಯಾಪಕ ನಾರಾಯಣ.ಯು, ಹಿರಿಯ ಅಧ್ಯಾಪಿಕೆ ಪದ್ಮಾವತಿ.ಎಂ, ಯು.ಪಿ ಎಸ್.ಆರ್.ಜಿ ಕನ್ವಿನರ್ ರಜನಿ.ಸಿ.ಕೆ ಹಾಗೂ ಎಲ್.ಪಿ ಎಸ್.ಆರ್.ಜಿ ಕನ್ವಿನರ್ ಪ್ರತಿಭಾಶ್ರೀ.ಕೆ ಶುಭಹಾರೈಸಿದರು. ವಿದ್ಯಾರ್ಥಿ ಸುಚಿತ್ರ ಸ್ವಾಗತಿಸಿ, ಗಹನ್ ವಂದಿಸಿದರು. ವಿದ್ಯಾರ್ಥಿನಿಗಳಾದ ಸಿಝ್ಮಾ, ವೀಕ್ಷಾ ಹಾಗೂ ಹರ್ಪಿತಾ ನಿರೂಪಿಸಿದರು. ಬಳಿಕ ಪುಟಾಣಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ರಂಗೇರಿದವು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಭಿರಾಮ್,ರಿಷಿಕ್ ಶೆಟ್ಟಿ, ಕದೀಜತ್ ಅಫ್ನಾ, ಹಿಬ ಫಾತಿಮ,ದೈವಿಕ್ ಯಲ್ ಎನ್ ನಿರೂಪಿಸಿದರು.

.jpg)
