ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯದ ಆಳ್ವಾಸ್ ನವದಿನ ಸಾಂಸ್ಕøತಿಕ ವೈಭವದ ಭಾಗವಾಗಿ ಗುರುವಾರ ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ ತಂಡದವರಿಂದ ‘ಶಶಿ ಪ್ರಭಾ ಪರಿಣಯ’ ಬಡಗುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಉಮೇಶ್ ಸುವರ್ಣ(ಭಾಗವತಿಕೆ), ನಾಗರಾಜ ಎಡಮೊಗೆ, ಕೃಷ್ಣಮೂರ್ತಿ ಭಟ್ ಬಗ್ವಾಡಿ(ಚೆಂಡೆ-ಮದ್ದಳೆ), ಮುಮ್ಮೇಳದಲ್ಲಿ ಗಣೇಶ್ ನಾಯಕ್ ಮುಗ್ವ (ಶಶಿಪ್ರಭೆ), ಪ್ರದೀಪ್ ಶೆಟ್ಟಿ ನಾರ್ಕಳ್ಳಿ(ಭ್ರಮರ ಕುಂತಳೆ)À, ಪ್ರವೀಣ್(ಕಮಲ ಗಂಧಿನಿ), ಆದಿತ್ಯ ಹೆಗಡೆ ಎಡೂರು (ಮಾರ್ತಾಂಡತೇಜ), ಶಿವಕುಮಾರ್ ಅಳಗೋಡು(ಕಮಲಧ್ವಜ), ರಾಘವೇಂದ್ರ ತುಂಗ ಕೋಟ(ಘೋರರೂಪಿ), ಪ್ರದೀಪ್ ಕುಮಾರ್ ಬ್ರಹ್ಮಾವರ(ದೂತಿ) ಪಾತ್ರ ನಿರ್ವಹಿಸಿದರು. ಸೂರ್ಯ ಭಟ್ ಎಡನೀರು ಸ್ವಾಗತಿಸಿದರು.