ಕಾಸರಗೋಡು: ನವಕೇರಳ ನಿರ್ಮಾಣದ ಅಂಗವಾಗಿ ಸರ್ಕಾರ ಸಾಧಿಸಿರುವ ಪ್ರಗತಿ ಮತ್ತು ಕೈಗೊಳ್ಳಲಿರುವ ಯೋಜನೆಗಳ ಕುರಿತು ಜನರೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಸಚಿವರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಆಯಾ ಕ್ಷೇತ್ರಗಳಲ್ಲಿ ಬಹುಜನ ವೇದಿಕೆಯನ್ನು ಆಯೋಜಿಸಲಾಗುವುದು. ಈ ಸಂದರ್ಭ ಎಲ್ಲಾ ಗಣ್ಯ ವ್ಯಕ್ತಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆಯನ್ನೂ ಆಯೋಜಿಸಲಾಗುವುದು. ಕ್ಷೇತ್ರ ಕೇಂದ್ರೀಕರಿಸಿ ನ. 19ರಂದು ಕಾಂಞಂಗಾಡ್ ಕ್ಷೇತ್ರದ ನವಕೇರಳ ವೇದಿಕೆ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ನವಕೇರಳ ವೇದಿಕೆಯ ಸಂಘಟನಾ ಸಮಿತಿ ರಚನಾ ಸಭೆ ಅಕ್ಟೋಬರ್ 7 ರಂದು ಸಂಜೆ 4ಕ್ಕೆ ಕಾಂಞಂಗಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಸಭಾಂಗಣದಲ್ಲಿ ಜರುಗಲಿದೆ. ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.

