HEALTH TIPS

ಕಣ್ಣೂರಿನಲ್ಲಿ ಮತ್ತೆ ನಕ್ಸಲ್ ದಾಳಿ: ಆಕಾಶದತ್ತ ಗುಂಡು

                ಕಣ್ಣೂರು: ಕೆಳಕಂನಲ್ಲಿ ನಕ್ಸಲ್ ತಂಡ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕಂಡ ಉಗ್ರರು ಆಕಾಶಕ್ಕೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

             ಗುಂಡು ಹಾರಿಸಿದ ನಂತರ ಓಡಲು ಯತ್ನಿಸಿದ ಅರಣ್ಯಾಧಿಕಾರಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ರಾಮಚಿಯಲ್ಲಿ ಈ ಘಟನೆ ನಡೆದಿದೆ.

                  ಮೂವರು ಅರಣ್ಯ ಇಲಾಖೆಯ ವಾಚರ್‍ಗಳು ಕಾಡಿನ ಮೂಲಕ ಪ್ರಯಾಣಿಸುತ್ತಿದ್ದಾಗ ನಕ್ಸಲ್ ತಂಡ ಎದುರಾಯಿತು.  ಅಧಿಕಾರಿಗಳನ್ನು ಕಂಡ ಐವರು ಶಸ್ತ್ರಸಜ್ಜಿತರ ಗುಂಪು ಗುಂಡಿನ ದಾಳಿ ನಡೆಸಿತು. ಬಳಿಕ ತಂಡ ಸ್ಥಳದಿಂದ ಪರಾರಿಯಾದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

            ಈ ಪ್ರದೇಶ ನಕ್ಸಲ್ ತಂಡ ಸಕ್ರಿಯವಾಗಿರುವ ಪ್ರದೇಶವಾಗಿದೆ. ಕಳೆದ ವಾರ ನಕ್ಸಲ್ ತಂಡ ಇಲ್ಲಿಗೆ ತಲುಪಿತ್ತು. ಅರಣ್ಯ ಇಲಾಖೆ ಪ್ರಕಾರ, ಆ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿದ ಗುಂಪು ತಮ್ಮ ಮೊಬೈಲ್ ಪೋನ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಚಾರ್ಜ್ ಮಾಡಿ ಮನೆಯಿಂದಲೇ ಆಹಾರ ಸೇವಿಸಿದೆ. ಶೋಧ ನಡೆಸುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries