HEALTH TIPS

ಕಲಬೆರಕೆ ಪೂಜಾ ಸಾಮಗ್ರಿಗಳ ವಿರುದ್ಧ ಸೂಚನೆ ನೀಡಿದ ಶಬರಿಮಲೆ ತಂತ್ರಿ: ತುಪ್ಪಾಭಿಷೇಕಕ್ಕೆ ಶುದ್ಧ ತುಪ್ಪ ತರಲು ಸೂಚನೆ

             ಶಬರಿಮಲೆ: ಪೂಜಾ ಸಾಮಗ್ರಿಗಳ ಕಲಬೆರಕೆ ವಿರುದ್ಧ ಶಬರಿಮಲೆ ತಂತ್ರಿ ಎಚ್ಚರಿಕೆ ನೀಡಿದ್ದಾರೆ. ಭಕ್ತರು ಶಬರಿಮಲೆಗೆ ಕಲಬೆರಕೆ ತುಪ್ಪ ತರುವುದನ್ನು ತಪ್ಪಿಸುವಂತೆ ಶಬರಿಮಲೆ ತಂತ್ರಿ ಕಂಠಾರರ್ ಮಹೇಶ್ ಮೋಹನನರ್ ಕೇಳಿಕೊಂಡಿದ್ದಾರೆ. ದೇವಸ್ಥಾನಕ್ಕೆ ಉತ್ತಮ ಸಾಮಗ್ರಿಗಳನ್ನು ಮಾತ್ರ ತರಬೇಕು ಎಂದು ಸೂಚಿಸಿರುವರು. 

                ಪೂಜಾದ್ರವ್ಯಗಳಲ್ಲಿನ ಅಶುದ್ಧತೆಯಿಂದ ವಿವಿಧ ಮೂರ್ತಿಗಳಿಗೆ ಚೈತನ್ಯ ಲೋಪ ಉಂಟಾಗುತ್ತದೆ ಎಂಬುದು ಅನೇಕ ದೇವಾಲಯಗಳ ದೇವತಾ ಸಮಸ್ಯೆಗಳಲ್ಲಿ ಸಾಬೀತಾಗಿದೆ. ಶಬರಿ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ಅತ್ಯಂತ ಪ್ರಿಯವಾದ ಸೇವೆಯಾಗಿದೆ.  ಅಭಿಷೇಕ ಪ್ರಿಯನೆಂದು ಕರೆಯಲ್ಪಡುವ ಅಯ್ಯಪ್ಪ ಸ್ವಾಮಿಗೆ ಇತರ ದ್ರವ್ಯಗಳಿಂದಲೂ ಅಭಿಷೇಕ  ಮಾಡಲಾಗುತ್ತಿದೆ. ಆದರೆ ತುಪ್ಪದ ಅಭಿಷೇಕವು ಅತ್ಯಂತ ಮಹತ್ವದ್ದಾಗಿದೆ. ಅದಕ್ಕೆ ನೀಡುವ ತುಪ್ಪ ಶುದ್ಧವಾಗಿರಬೇಕು ಎಂದು ಹಲವು ಬಾರಿ ಚರ್ಚೆಯಾಗಿದೆ. ತುಪ್ಪದ ಹೊರತಾಗಿ ವಿವಿಧ ದೇವಸ್ಥಾನಗಳಲ್ಲಿ ಬಳಸುವ ಎಣ್ಣೆ ಸೇರಿದಂತೆ ವಿವಿಧ ವಸ್ತುಗಳಿಂದ ಕಲಬೆರಕೆ ಪದಾರ್ಥಗಳು ಪತ್ತೆಯಾಗಿವೆ.

             ಇದಲ್ಲದೇ ಯಾತ್ರಾರ್ಥಿಗಳು ತಮ್ಮ ಸಾಂಪ್ರದಾಯಿಕ ವ್ರತಗಳನ್ನು ಮುಂದುವರಿಸಬೇಕು, ಇಲ್ಲದ ಆಚರಣೆಗಳನ್ನು ಮಾಡಬಾರದು ಎಂದಿರುವರು. ಪ್ರಾಂಗಣದಲ್ಲಿ ತೆಂಗಿನಕಾಯಿಯನ್ನು ಒಡೆಯುವುದು ಮತ್ತು ದೇಗುಲದ ಮೇಲೆ ಬಟ್ಟೆಗಳನ್ನು ಬಿಡುವುದು ವಾಡಿಕೆಯಲ್ಲ. ಯಾತ್ರಾರ್ಥಿಗಳು ಇಂತಹ ಆಚರಣೆಗಳಿಂದ ದೂರವಿರಬೇಕು ಎಂದಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries