HEALTH TIPS

ಉಳಿಯದಲ್ಲಿ ಧನ್ವಂತರಿ ಜಯಂತಿ

                ಮಧೂರು: ಉಳಿಯ ಧನ್ವಂತರಿ ಸನ್ನಿಧಿಯಲ್ಲಿ ಆಶ್ವುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್ವಂತರಿ ಜಯಂತಿ ಕಾರ್ಯಕ್ರಮ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ನಡೆಯಿತು. ಪ್ರಾತ: ಕಾಲ ಶ್ರೀ ಧನ್ವಂತರಿ ದೇವರಿಗೆ ಪವಮಾನಭಿಷೇಕ, ಮಹಾಪೂಜೆ, ಧನ್ವಂತರಿ ಹೋಮದಿಂದ ಪ್ರಾರಂಭಗೊಂಡು ಸಂಜೆ ಶ್ರೀಧನ್ವಂತರಿ ದೇವರಿಗೆ ಕಾರ್ತಿಕ ಪೂಜೆಯಲ್ಲಿ ಸಂಪನ್ನಗೊಂಡಿತು.

             ವೇದಿಕೆಯಲ್ಲಿ ಬೆಳಗ್ಗೆ ವಾದ್ಯ ಘೋಷವಿದ್ದೂ . ಡಾ. ಪಲ್ಲವಿ ರಾಮ ಕಿಶೋರ ಅಸ್ರ ನಿರೂಪಣೆಯೊಂದಿಗೆ ಪದ್ಮಪ್ರಿಯ ಭಜನಾ ಮಂಡಳಿಯಿಂದ  ಭಜನಾ ಕಾರ್ಯಕ್ರಮ ನೇರವೇರಿತು. ಈ ಸಂದರ್ಭ ಮಧೂರು ನಾರಾಯಣ ರಂಗಾಭಟ್ಟರನ್ನು ಸನ್ಮಾನಿಸಿ ಗೌರವಿಸಲಾಯಿತು. ಕು ಮೈತ್ರಿ ಯು ಪ್ರಾರ್ಥಿಸಿದರು. ಧನ್ಯಾ ಮುರಳಿಕೃಷ್ಣ ಅಸ್ರ ನಿರೂಪಿಸಿದರು. ನಂತರ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ 60ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾಳಮದ್ದಲೆ ನಡೆಯಿತು. ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ , ಪಾರಿಜಾತಾಪಹಾರ  ಮತ್ತು ಗರುಡ ಗರ್ವ ಭಂಗ ಪ್ರಸಂಗಗಳ ಕೂಟದಲ್ಲಿ  ಯಕ್ಷಗಾನದ ಕಲಾ ಸಂಘದ ಕಲಾವಿದರೊಂದಿಗೆ ಅತಿಥಿ ಕಲಾವಿದರಾದ ಪಕಳಕುಂಜ  ಶ್ಯಾಂ ಭಟ್ , ಹರೀಶ್ ಬಳಂತಿಮೊಗರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ರವಿರಾಜ ಪನೆಯಾಲ, ವಾಸುದೇವ ರಂಗಾಭಟ್ಟ ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries