ಮಧೂರು: ಉಳಿಯ ಧನ್ವಂತರಿ ಸನ್ನಿಧಿಯಲ್ಲಿ ಆಶ್ವುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್ವಂತರಿ ಜಯಂತಿ ಕಾರ್ಯಕ್ರಮ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ನಡೆಯಿತು. ಪ್ರಾತ: ಕಾಲ ಶ್ರೀ ಧನ್ವಂತರಿ ದೇವರಿಗೆ ಪವಮಾನಭಿಷೇಕ, ಮಹಾಪೂಜೆ, ಧನ್ವಂತರಿ ಹೋಮದಿಂದ ಪ್ರಾರಂಭಗೊಂಡು ಸಂಜೆ ಶ್ರೀಧನ್ವಂತರಿ ದೇವರಿಗೆ ಕಾರ್ತಿಕ ಪೂಜೆಯಲ್ಲಿ ಸಂಪನ್ನಗೊಂಡಿತು.
ವೇದಿಕೆಯಲ್ಲಿ ಬೆಳಗ್ಗೆ ವಾದ್ಯ ಘೋಷವಿದ್ದೂ . ಡಾ. ಪಲ್ಲವಿ ರಾಮ ಕಿಶೋರ ಅಸ್ರ ನಿರೂಪಣೆಯೊಂದಿಗೆ ಪದ್ಮಪ್ರಿಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೇರವೇರಿತು. ಈ ಸಂದರ್ಭ ಮಧೂರು ನಾರಾಯಣ ರಂಗಾಭಟ್ಟರನ್ನು ಸನ್ಮಾನಿಸಿ ಗೌರವಿಸಲಾಯಿತು. ಕು ಮೈತ್ರಿ ಯು ಪ್ರಾರ್ಥಿಸಿದರು. ಧನ್ಯಾ ಮುರಳಿಕೃಷ್ಣ ಅಸ್ರ ನಿರೂಪಿಸಿದರು. ನಂತರ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ 60ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾಳಮದ್ದಲೆ ನಡೆಯಿತು. ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ , ಪಾರಿಜಾತಾಪಹಾರ ಮತ್ತು ಗರುಡ ಗರ್ವ ಭಂಗ ಪ್ರಸಂಗಗಳ ಕೂಟದಲ್ಲಿ ಯಕ್ಷಗಾನದ ಕಲಾ ಸಂಘದ ಕಲಾವಿದರೊಂದಿಗೆ ಅತಿಥಿ ಕಲಾವಿದರಾದ ಪಕಳಕುಂಜ ಶ್ಯಾಂ ಭಟ್ , ಹರೀಶ್ ಬಳಂತಿಮೊಗರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ರವಿರಾಜ ಪನೆಯಾಲ, ವಾಸುದೇವ ರಂಗಾಭಟ್ಟ ಭಾಗವಹಿಸಿದ್ದರು.