ಮುಳ್ಳೇರಿಯ: ಪೆರಿಯ ಆಲಕ್ಕೋಡು ಪರಂಪರಾ ವಿದ್ಯಾಪೀಠದ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವವು ಸಂಭ್ರಮದಿಂದ ಜರಗುತ್ತಿದೆ. ಈ ಸಂದರ್ಭದಲ್ಲಿ ನಡೆಯುತ್ತಿರುವ ಔಷ|ಧೀಯ ಸಸ್ಯಗಳ ಪ್ರದರ್ಶನವನ್ನು ಶನಿವಾರ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮಿಗಳು ಉದ್ಘಾಟಿಸಿದರು. ದಿವಾಕರನ್ ನೀಲೇಶ್ವರ ಅವರ ನೇತೃತ್ವದಲ್ಲಿ ಪ್ರದರ್ಶನ ನಡೆಯುತ್ತಿದೆ. ಗೋಶಾಲೆಯ ವಿಷ್ಣು ಪ್ರಸಾದ್ ಹೆಬ್ಬಾರ್, ಭಕ್ತಾದಿಗಳು ಜೊತೆಗಿದ್ದರು.