ಕಣ್ಣೂರು: ಇರಿಟ್ಟಿಯಲ್ಲಿ ನಕ್ಸಲ್ ಭಯೋತ್ಪಾದಕರ ಪತ್ತೆಗಾಗಿ ಪೋಲೀಸರು ಮತ್ತು ಥಂಡರ್ ಬೋಲ್ಟ್ ಶೋಧ ಕಾರ್ಯ ತೀವ್ರಗೊಳಿಸಿದೆ. ಸೋಮವಾರ ರಾತ್ರಿಯೂ ನಕ್ಸಲ್ ತಂಡ ಥಂಡರ್ ಬೋಲ್ಟ್ ಗುಂಪಿನೊಂದಿಗೆ ಘರ್ಷಣೆ ನಡೆಸಿದೆ.
ರಾತ್ರಿ ಅರಣ್ಯದಲ್ಲಿ ತಪಾಸಣೆಗಾಗಿ ಉಳಿದುಕೊಂಡಿದ್ದ ತಂಡದೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಇದಾದ ಬಳಿಕ ಥಂಡರ್ ಬೋಲ್ಟ್ ನ ಮತ್ತೊಂದು ತಂಡ ಹುಡುಕಾಟ ಆರಂಭಿಸಿದೆ.
ಇಂದು ಬೆಳಗ್ಗೆಯಿಂದ ಥಂಡರ್ ಬೋಲ್ಟ್ ಮತ್ತು ಭಯೋತ್ಪಾದನಾ ನಿಗ್ರಹ ದಳದ ನೇತೃತ್ವದ ಹೆಚ್ಚಿನ ಪಡೆಗಳು ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿದೆ. ನಿನ್ನೆ ನಕ್ಸಲ್ ತಂಡ ಮತ್ತು ಥಂಡರ್ ಬೋಲ್ಟ್ ನಡುವೆ ಎರಡು ಬಾರಿ ಘರ್ಷಣೆ ನಡೆದಿತ್ತು. ಆದರೆ, ಯಾರನ್ನೂ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಎನ್ಕೌಂಟರ್ ಬಳಿಕ ಅವರು ಪರಾರಿಯಾಗಿದ್ದಾರೆ.
ನಿನ್ನೆ ಬೆಳಗ್ಗೆ ಥಂಡರ್ ಬೋಲ್ಟ್ ಗಸ್ತಿನ ವೇಳೆ ಮಾವೋವಾದಿ ತಂಡದೊಂದಿಗೆ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಥಂಡರ್ಬೋಲ್ಟ್ ಈ ಪ್ರದೇಶದಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಂಡಿದೆ.