ಕಣ್ಣೂರು: ನೌಕಾ ಅಕಾಡೆಮಿಗೆ ನುಗ್ಗಲು ಯತ್ನಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ಮಹಮ್ಮದ್ ಮುರ್ತಾಸ್ ಬಂಧಿತ ಆರೋಪಿ.
ಕಣ್ಣೂರಿನ ಎಜಿಮಲದಲ್ಲಿರುವ ಭದ್ರತಾ ವಲಯವಾದ ನೇವಲ್ ಅಕಾಡೆಮಿಯಲ್ಲಿ ಯುವಕ ಅತಿಕ್ರಮ ಪ್ರವೇಶಕ್ಕೆ ಯತ್ನಿಸಿದ್ದಾನೆ. ಪಯ್ಯನ್ನೂರು ಪೋಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಯುವಕನ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುವುದು ಎಂದು ವಿವಿಧ ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ.