ಕಾಸರಗೋಡು: ಸಮಾಜದಲ್ಲಿರುವ ಹಕ್ಕು, ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಪರಿಶಿಷ್ಟ ಪಂಗಡದ ಸದಸ್ಯರು ತಮ್ಮ ಬದುಕನ್ನು ಮುಂಚೂಣಿಗೆ ತರಬೇಕು ಎಂದು ಮಹಿಳಾ ಆಯೋಗದ ಸದಸ್ಯೆ ಅಡ್ವ.ಇಂದಿರಾ ರವೀಂದ್ರನ್ ಹೇಳಿದರು.
ಕುತ್ತಿಕೋಲ್ ಗ್ರಾಮ ಪಂಚಾಯಿತಿಯ ವೈಗಿರಿ ವ್ಯಶಾರಿ ಸಮಿತಿಯ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡಗಳ ವಲಯ ಶಿಬಿರದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಹಿಳಾ ಆಯೋಗದ ಸದಸ್ಯೆ ಮಾತನಾಡಿದರು.
ಪರಿಶಿಷ್ಟ ಪಂಗಡದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಕಾಳಜಿ ವಹಿಸಬೇಕು. ಶಾಲೆಗಳಲ್ಲಿ ಆಹಾರ ಮತ್ತು ಅಧ್ಯಯನ ಸೌಲಭ್ಯಗಳು ಸೇರಿದಂತೆ ಅತ್ಯುತ್ತಮ ಶೈಕ್ಷಣಿಕ ಪರಿಸ್ಥಿತಿಗಳನ್ನು ಸರ್ಕಾರ ಒದಗಿಸಿದೆ. ಪಾಲಕರು ತಮ್ಮ ಮಕ್ಕಳು ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುವಂತೆ ನೋಡಿಕೊಳ್ಳಬೇಕು. ಶಿಕ್ಷಣವು ಜೀವನದಲ್ಲಿನ ಕಷ್ಟಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ ಈ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ಅರ್ಹರ ಕೈ ಸೇರುತ್ತಿಲ್ಲ. ಎಲ್ಲೋ ಅದನ್ನು ನಿರ್ಬಂಧಿಸಲಾಗಿದೆ ಮತ್ತು ಬಳಸಿಕೊಳ್ಳಲಾಗುತ್ತದೆ. ಸರ್ಕಾರ ಪರಿಚಯಿಸಿರುವ ಸವಲತ್ತುಗಳನ್ನು ಪಡೆಯಲು ಆಧಾರ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳು ಅತ್ಯಗತ್ಯ. ಪರಿಶಿಷ್ಟ ಪಂಗಡದ ಶಿಬಿರದ ಅಂಗವಾಗಿ ಮಹಿಳಾ ಆಯೋಗ ಊರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಜನರ ಬಳಿ ಇಂತಹ ಅಗತ್ಯ ದಾಖಲೆಗಳಿಲ್ಲದಿರುವುದು ಕಂಡುಬಂದಿದೆ. ಅಗತ್ಯ ದಾಖಲಾತಿಗಳಿಲ್ಲದ ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ತುರ್ತಾಗಿ ಈ ದಾಖಲೆಗಳನ್ನು ನೀಡಲು ಪಂಚಾಯಿತಿ ಅಧೀನದಲ್ಲಿ ಸಂಬಂಧಿಸಿದ ಇಲಾಖೆಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ಕುಟುಂಬಶ್ರೀ ನೆರೆಕರೆ ತಂಡಗಳು ಮಹಿಳಾ ಆಯೋಗದಿಂದ ಒದಗಿಸುವ ಸೇವೆಗಳು ಮತ್ತು ನೆರವಿನ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲು ಚರ್ಚೆ ನಡೆಸಬೇಕು. ಮಗುವಿನ ಪಿತೃತ್ವವನ್ನು ನಿರಾಕರಿಸಿದರೆ, ಅದನ್ನು ಸಾಬೀತುಪಡಿಸಲು ಮಹಿಳಾ ಆಯೋಗವು ಡಿಎನ್ಎ ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ. ಪರಿಶಿಷ್ಟ ಪಂಗಡದ ವಲಯದಲ್ಲಿ ಮಹಿಳೆಯರಿಗೆ ಆದ್ಯತೆ ಸಿಗುತ್ತಿರುವುದು ಸಂತಸ ತಂದಿದೆ. ಆಯೋಗ ನಡೆಸಿದ ಮನೆ ಭೇಟಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಯಾರೂ ದೂರು ನೀಡಿಲ್ಲ. ಮಹಿಳಾ ಆಯೋಗದ ಸದಸ್ಯೆ ಮಾತನಾಡಿ, ಮಹಿಳೆಯರು ಹಿಂದೆ ಬಿದ್ದರೆ ಇಡೀ ಸಮಾಜವೇ ಹಿಂದುಳಿಯುತ್ತದೆ ಎಂದರು.
ಕುತ್ತಿಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅಧ್ಯಕ್ಷತೆ ವಹಿಸಿದ್ದರು. ಅಡ್ವ.ಪಿ.ಕುಂಞÂ ಆಯಿಷÀ, ಅಡ್ವ.ವಿ.ಆರ್. ಮಹಿಳಾಮಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಶೋಭನಕುಮಾರಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶೇಮೀರ್ ಕುಂಬಕೋಡ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಕೆ.ಅರವಿಂದನ್, ಸದಸ್ಯರಾದ ಪಿ.ಮಾಧವನ್, ಕೆ.ಕುಂಞÂ ರಾಮನ್, ಅಶ್ವತಿ ಅಜಿಕುಮಾರ್, ಕೆ.ಆರ್.ವೇಣು, ಶಾಂತಾ ಪಯ್ಯಂಗಾನಂ, ಮಹಿಳಾ ಆಯೋಗದ ಯೋಜನಾಧಿಕಾರಿ ಎನ್. ದಿವ್ಯಾ ಮಾತನಾಡಿದರು. ಗಿರಿಜನ ವಿಸ್ತರಣಾಧಿಕಾರಿ ವೀರೇಂದ್ರ ಕುಮಾರ್ ಅವರು ಪರಿಶಿಷ್ಟ ಪಂಗಡಗಳ ವ್ಯಾಪ್ತಿಯಲ್ಲಿ ಸರ್ಕಾರ ನಡೆಸುವ ಯೋಜನೆಗಳ ವಿಷಯ ಹಾಗೂ ಅಬಕಾರಿ ತಡೆ ಅಧಿಕಾರಿ ಎನ್.ಜಿ.ರಘುನಾಥನ್ ಕುಡಿತ ನಿಯಂತ್ರಣ ವಿಷಯ ಮಂಡಿಸಿದರು.


