ಕೊಲ್ಲಂ: 62ನೇ ರಾಜ್ಯ ಶಾಲಾ ಕಲೋತ್ಸವ ನಿನ್ನೆ ಆರಂಭವಾಗಿದೆ. ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಚಿತ್ರನಟಿ ನಿಖಿಲಾ ವಿಮಲ್ ಮುಖ್ಯ ಅತಿಥಿಯಾಗಿದ್ದರು. ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ 24 ಸ್ಥಳಗಳಲ್ಲಿ 239 ಸ್ಪರ್ಧೆಗಳಲ್ಲಿ 14,000 ಪ್ರತಿಭೆಗಳು ಸ್ಪರ್ಧಿಸಲಿದ್ದಾರೆ.
ಹದಿಹರೆಯದ ಮನಸ್ಸುಗಳು ಅನಗತ್ಯ ಪೈಪೆÇೀಟಿಯಿಂದ ಕಲುಷಿತಗೊಳ್ಳಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಪೋಷಕರು ಪೈಪೆÇೀಟಿ ಎಂದು ನೋಡಬಾರದು, ಇಂದು ಸೋತವರು ನಾಳೆ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಹೇಳಿದರು. ಕಲೆಯೇ ಅಂಕಗಳನ್ನು ಗಳಿಸುವ ಸಾಧನ ಎಂಬ ಚಿಂತನೆಯನ್ನೂ ಕೈಬಿಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಉದ್ಘಾಟನಾ ಸಮಾರಂಭವು ಆಶ್ರಮ ಮೈದಾನದ ಒಎನ್ವಿ ಸ್ಮೃತಿ ಸ್ಥಳದಲ್ಲಿ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಂದ ಮಂಗಳಂಕಳಿ ಕಾರ್ಯಕ್ರಮ ಮತ್ತು ನಟಿ ಆಶಾ ಶರತ್ ಮತ್ತು ಅವರ ತಂಡದ ನೃತ್ಯ ಶಿಲ್ಪದೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸಚಿವರಾದ ಕೆ.ಎನ್.ಬಾಲಗೋಪಾಲ್, ಕೆ.ರಾಜನ್, ಜೆ.ಚಿಂಚುರಾಣಿ, ಕೆ.ಬಿ.ಗಣೇಶ್ ಕುಮಾರ್, ಪಿ.ಎ.ಮಹಮ್ಮದ್ ರಿಯಾಜ್ ಉಪಸ್ಥಿತರಿದ್ದರು.
ಕೊಲ್ಲಂ ಮುಖ್ಯ ವೇದಿಕೆಯಲ್ಲಿ ಎಚ್ಎಸ್ ವಿಭಾಗದ ಬಾಲಕಿಯರ ಮೋಹಿನಿಯಾಟ್ಟಾ ಸ್ಪರ್ಧೆಯೊಂದಿಗೆ ಸ್ಪರ್ಧೆಯ ಕುತೂಹಲಗೊಂಡಿತು. ನಾಲ್ಕನೇ ಬಾರಿಗೆ ಕೊಲ್ಲಂ ರಾಜ್ಯ ಶಾಲಾ ಕಲೋತ್ಸವವನ್ನು ಆಯೋಜಿಸುತ್ತಿದೆ. ಕಳೆದ ಬಾರಿ ಕೋಝಿಕ್ಕೋಡ್ ನಲ್ಲಿ ನಡೆದಿತ್ತು. ಆ. 8 ರಂದು ಕಲೋತ್ಸವದ ಸಮಾರೋಪ ಸಮಾರಂಭವನ್ನು ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಉದ್ಘಾಟಿಸುವರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಮಮ್ಮುಟ್ಟಿ ಆಗಮಿಸಲಿದ್ದಾರೆ.





