ತಿರುವನಂತಪುರಂ: ರಾಜ್ಯ ಸರ್ಕಾರ ಮತ್ತೆ ವಿದ್ಯಾರ್ಥಿಗಳಿಗೆ ಸಮಸ್ಯೆ ಸೃಷ್ಟಿಸಿದೆ. ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಯ ದಿನವೇ ರಾಜ್ಯ ಸೆಟ್ ಪರೀಕ್ಷೆ ನಿಗದಿಯಾಗಿರುವುದರಿಂದ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದಾರೆ.
ಶಿಕ್ಷಕರ ನೇಮಕಾತಿಗೆ ಸಿ-ಟಿಇಟಿ ಮತ್ತು ಸೆಟ್ ಒಂದೇ ದಿನ ನಡೆಸಬಾರದು ಎಂಬ ಬೇಡಿಕೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ.
ಈ ಎರಡೂ ಪರೀಕ್ಷೆಗಳು ಜನವರಿ 21 ರಂದು ನಡೆಯಲಿದೆ. ಎರಡೂ ಪರೀಕ್ಷೆ ಬರೆಯಲು ಕಾಯುತ್ತಿರುವವರಿಗೆ ಒಂದೇ ದಿನಾಂಕ ಪರೀಕ್ಷೆ ನಡೆಯುವುದರಿಂದ ಹೊಡೆತ ಬಿದ್ದಿದೆ. ಸೆಟ್ಗೆ ಅರ್ಹತೆ ಪಿಜಿ ಮತ್ತು ಬಿಇ. ಆದಾಗ್ಯೂ, ಹೆಚ್ಚಿನ ಸೆಟ್ ಅರ್ಜಿದಾರರು ಬಿ.ಡಿ ಜೊತೆಗೆ ಪದವಿ ಅರ್ಹತೆಯಾದ ಸಿ-ಟಿಇಟಿಗೆ ಸಹ ತಯಾರಿ ನಡೆಸಿದ್ದಾರೆ. ರಾಷ್ಟ್ರಮಟ್ಟದ ಸಿ-ಟಿಇಟಿ ಪರೀಕ್ಷೆಯನ್ನು ಮರುಹೊಂದಾಣಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಸೆಟ್ ಪರೀಕ್ಷೆಯನ್ನು ಇನ್ನೊಂದು ದಿನಕ್ಕೆ ವರ್ಗಾಯಿಸಬೇಕೆಂಬ ತೀವ್ರ ಬೇಡಿಕೆ ಇದೆ.
ಸಿ.ಟೆಟ್ ಎನ್ನುವುದು ಕೇಂದ್ರ ಸರ್ಕಾರದ ಅಡಿಯಲ್ಲಿನ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ನಡೆಸುವ ಅರ್ಹತಾ ಪರೀಕ್ಷೆಯಾಗಿದೆ. ಸೆಟ್ ಎಂಬುದು ಕೇರಳದÀಲ್ಲಿ ಉನ್ನತ ಮಾಧ್ಯಮಿಕ ಶಿಕ್ಷಕರ ಅರ್ಹತೆಗಾಗಿ ರಾಜ್ಯ ಸರ್ಕಾರ ನಡೆಸುವ ಅರ್ಹತಾ ಪರೀಕ್ಷೆಯಾಗಿದೆ. ಈಗ ಎರಡೂ ಪರೀಕ್ಷೆ ಬರೆಯಲು ಕಾದು ಕುಳಿತವರು ಒಂದನ್ನು ಬರೆಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸೆಟ್ ಪರೀಕ್ಷೆಗೆ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕೇಂದ್ರಗಳಿವೆ. ಸಿ.ಟೆಟ್ ಪರೀಕ್ಷಾ ಕೇಂದ್ರಗಳು ಎರ್ನಾಕುಳಂ, ಕೋಯಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ ಮಾತ್ರ ಕೇಂದ್ರಗಳಿವೆ.





