ಮುಳ್ಳೇರಿಯ: ಕೋಟೂರು ಶ್ರೀ ಕಾರ್ತಿಕೇಯ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರ ಬಯಲಾಟ ಸಮಿತಿಯ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೆÇೀಷಿತ ಯಕ್ಷಗಾನ ಮಂಡಳಿಯವರಿಂದ ಕೋಟೂರಿನಲ್ಲಿ " ಚಕ್ರವ್ಯೂಹ - ದಮಯಂತೀ ಪುನಃ ಸ್ವಯಂವರ " ಎಂಬ ಪುರಾಣಕಥಾಭಾಗದ ಯಕ್ಷಗಾನ ಬಯಲಾಟ ಪ್ರದರ್ಶನ ಸಂಪನ್ನವಾಯಿತು.
ಶ್ರೀಮದ್ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ಚಿತ್ತೈಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಸಮಾರಂಭಕ್ಕೆ ಶುಭಹಾರೈಸಿದರು.
ಬೆಳಗ್ಗೆ ಗಣಹೋಮ , ಮಧ್ಯಾಹ್ನಪೂಜೆ , ಸಂಜೆ ಶ್ರೀ ಗಣಪತಿದೇವರ ಮಾಹಾಪೂಜೆ ಜರಗಿ ಬಳಿಕ ಶ್ರೀ ದೇವರ ಮೆರವಣಿಗೆಯು ಭಜನೆ ಘೋಷಗಳೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆಯೂ ಜರಗಿತು. ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು, ಮತ್ತು ಸಹಸ್ರ ಸಂಖ್ಯೆಯ ಕಾಲಾಭಿಮಾನಿಗಳ ಪೆÇ್ರೀತ್ಸಾದಿಂದ ಕಾರ್ಯಕ್ರಮ ಪ್ರಶಂಸೆಗೆ ಪಾತ್ರವಾಗಿ ಯಶಸ್ವಿಯಾಯಿತು.






