ಕುಂಬಳೆ: ವಿಶೇಷ ಚೇತನ(ಡಿಫರೆಂಟ್ಲಿ ಏಬಲ್) ಪೀಪಲ್ಸ್ ಲೀಗ್ (ಡಿ.ಎ.ಪಿ.ಎಲ್.) ಮಂಜೇಶ್ವರ ವಲಯ ಮುಖ್ಯಸ್ಥರ ಶಿಬಿರ ಜನವರಿ 7 ರಂದು ಭಾನುವಾರ ಬೆಳಿಗ್ಗೆ 9 ರಿಂದ ಉಪ್ಪಳ ನಯಾಬಜಾರ್ನ ಲಯನ್ಸ್ ಕ್ಲಬ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
ಸಂಸದ ರಾಜ ಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕ ಎಕೆಎಂ ಅಶ್ರಫ್ ಭಾಗವಹಿಸಲಿದ್ದಾರೆ. ಡಿಎಪಿಎಲ್ ಎಂಬ ವಿಶೇಷ ಚೇತನರ ಸಂಘಟನೆ ರಚನೆಯಾದ ನಂತರ ಮಂಜೇಶ್ವರ ವಲಯ ಮಟ್ಟದ ಪ್ರಥಮ ಶಿಬಿರವು ಯುಡಿಐಡಿ ಕಾರ್ಡ್ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಜಾಗೃತಿ ಮೂಡಿಸಲು ನಡೆಯಲಿದೆ.
ವಿಕಲಚೇತನ ಸಮುದಾಯಕ್ಕೆ ಶಿಕ್ಷಣ ನೀಡುವುದರ ಜೊತೆಗೆ ನಿರಾರಣೆ ಆಗುತ್ತಿರುವ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಮುಖ್ಯವಾಹಿನಿಗೆ ತರುವುದು ಇದರ ಉದ್ದೇಶವಾಗಿದೆ ಎಂದು ಮುಖಂಡರು ಹೇಳಿದರು. ಜಾತಿ, ಧರ್ಮ, ರಾಜಕೀಯ ಪಕ್ಷಗಳ ಭೇದವಿಲ್ಲದೆ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ, ಉದ್ಯೋಗ ರಕ್ಷಣೆ ನೀಡುವುದು ಸಂಸ್ಥೆಯ ಮೊದಲ ಆದ್ಯತೆಯಾಗಿದೆ. ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ತಡೆಹಿಡಿಯುವ ಮೂಲಕ ಸರ್ಕಾರವು ಅಂಗವಿಕಲರನ್ನು ನಿರ್ಲಕ್ಷಿಸಿದೆ ಎಂದು ಮುಖಂಡರು ಆರೋಪಿಸಿದರು.
ಶಿಬಿರದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್, ವೈದ್ಯಕೀಯ ಪ್ರಮಾಣಪತ್ರದ ಪ್ರತಿ ಮತ್ತು ಭಾವಚಿತ್ರವನ್ನು ತರಬೇಕು ಎಂದು ಸೂಚನೆ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಲೀಗ್ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕುಂಞÂ ಅಬ್ದುಲ್ಲಾ ಕೊಳವಯಲ್, ಜಿಲ್ಲಾ ಕಾರ್ಯದರ್ಶಿ ಬೇಬಿ ಮುಹಮ್ಮದ್, ವಲಯ ಅಧ್ಯಕ್ಷ ವಿ.ಪಿ.ಅಬ್ದುಲ್ ಕಾದರ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.