HEALTH TIPS

ದೇವಸ್ಥಾನದ ಉತ್ಸವಕ್ಕೆ ರೋಬೋಟಿಕ್ ಆನೆ: ಹತ್ತು ಅಡಿ ಎತ್ತರದ ಶ್ರೀ ಶಿವಶಂಕರ ಹರಿಹರನ್ ಸಿದ್ಧ

                ಎರ್ನಾಕುಳಂ: ಕೇರಳ-ತಮಿಳುನಾಡು ಗಡಿ ಗ್ರಾಮ ರೋಬೋಟಿಕ್ ಆನೆ ಓಡಿಸಲು ಸಿದ್ಧತೆ ನಡೆಸಿದೆ. ಗುಡಲೂರಿನ ಶ್ರೀ ಶಂಕರನ್ ಕೋವಿಲ್ ನಲ್ಲಿ ರೋಬೋಟಿಕ್ ಆನೆಯನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ.

                ನಾಳೆ ದೇವಸ್ಥಾನದಲ್ಲಿ ಸಮಾರಂಭ ನಡೆಯಲಿದೆ. ಶ್ರೀ ಶಿವಶಂಕರ ಹರಿಹರನ್ ಎಂಬ ರೋಬೋಟಿಕ್ ಆನೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ಪ್ರಕಟಿಸಿರುವರು.

               ಈ ಹಿಂದೆ ತ್ರಿಶೂರ್ ಕಲ್ಲೆತುಂಕಾರದ ಇರಿಂಚದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಇರಿಂಚದಪ್ಪಿಲ್ಲಿ ರಾಮನ್ ಎಂಬ ರೋಬೋಟಿಕ್ ಆನೆಯನ್ನು ಸ್ಥಾಪಿಸಲಾಗಿತ್ತು.ವಾಯ್ಸ್ ಫಾರ್ ಏಷ್ಯನ್ ಎಲಿಫೆಂಟ್ಸ್ ಸೊಸೈಟಿಯು ರೋಬೋಟಿಕ್ ಆನೆಯನ್ನು ಶ್ರೀ ಶಂಕರನ್ ಕೋವಿಲ್‍ಗೆ ಸಮರ್ಪಿಸುತ್ತಿದೆ.

                   ಈ ದೇವಾಲಯವು ಕೇರಳ-ತಮಿಳುನಾಡು ಗಡಿಯಲ್ಲಿ ಇರುವುದರಿಂದ ಮಲಯಾಳಿಗಳ ಆಡಳಿತದಲ್ಲಿದೆ. ಈ ಹಿಂದೆ ಉತ್ಸವಕ್ಕೆ ಜೀವಂತ ಆನೆಗಳನ್ನು ಬಳಸಲಾಗುತ್ತಿತ್ತು. ಅರಣ್ಯ ಪ್ರದೇಶವಾಗಿರುವುದರಿಂದ ಆನೆಗಳನ್ನು ಸಾಗಿಸಲು ಸರ್ಕಾರದ ಅನುಮತಿ ಅಗತ್ಯ. ದೇಗುಲದ ಖಜಾಂಚಿ ಅಡ್ವ.ಸುಧೀಶಕುಮಾರ್ ಮಾತನಾಡಿ, ಆನೆಗಳು ಮತ್ತು ಮನುಷ್ಯರಿಗೆ ಆಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ರೋಬೋಟಿಕ್ ಆನೆಯನ್ನು ಬಳಸಲಾಗುವುದು ಎಂದಿರುವರು.

                 ಹತ್ತು ಅಡಿ ಎತ್ತರದ ರೇಬೋ ಆನೆ ನಿರ್ಮಿಸಲಾಗಿದೆ.ನಿರ್ಮಾಣಕ್ಕೆ ಸುಮಾರು ಒಂಬತ್ತು ಲಕ್ಷ ರೂಪಾಯಿ ವೆಚ್ಚವಾಗಿದೆ. ಚಾಲಕುಡಿ ಮೂಲದ ಸಂಸ್ಥೆಯು ಆನೆಯನ್ನು ನಿರ್ಮಿಸಲು ಸುಮಾರು 10 ತಿಂಗಳು ತೆಗೆದುಕೊಂಡಿತು. ಕೊಂಬು ಕಿವಿ ಮತ್ತು ತಲೆಯನ್ನು ಓರೆಯಾಗಿಸಿ ನಿಜವಾದ ಆನೆಯ ಅನಿಸಿಕೆ ನೀಡುವ ರೀತಿಯಲ್ಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries