ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ನೂತನ ಜೋಗಿ ಸಮಾಜ ಭವನದ ಉದ್ಘಾಟನಾ ಸಮಾರಂಭ ಫೆ.4 ಭಾನುವಾರ ಬದಿಯಡ್ಕ ಸಮೀಪದ ಮೂಕಂಪಾರೆಯಲ್ಲಿ ಜರಗಲಿರುವುದು. ತಪೋನಿಧಿ ಶ್ರೀ 1008 ರಾಜಯೋಗಿ ನಿರ್ಮಲ್ನಾಥ್ ಜೀ ಮಹಾರಾಜ್, ಶ್ರೀ ಯೋಗೀಶ್ವರ ಮಠ ಕದ್ರಿ ಮಂಗಳೂರು ಇವರ ಅಮೃತಹಸ್ತದಿಂದ ಉದ್ಘಾಟನೆಗೊಳ್ಳಲಿದೆ. ಶ್ರೀ 1008 ಮಠಾೀಶ ಶ್ರೀ ರಾಜಗುರು ಶ್ರದ್ಧಾನಾಥ್ ಜೀ ಮಹಾರಾಜ್ ಶ್ರೀ ಯೋಗೀಶ್ವರ ಮಠ ವಿಟ್ಲ ಇವರ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಈ ಸಂದಭರ್Àದಲ್ಲಿ ಭಜನೆ, ರೋಟ್ ಪೂಜೆ, ಜೋಗಿ ಸಮಾಜದ ಪೂರ್ವಾಧ್ಯಕ್ಷರುಗಳಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ, ವಿಕಲಚೇತನ ವಿದ್ಯಾರ್ಥಿಗಳಿಗೆ ಧನಸಹಾಯ, ಸ್ವಯಂಸೇವಕರಿಗೆ ಅಭಿನಂದನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.3ರಂದು ಸಂಜೆ 6 ಗಂಟೆಯಿಂದ ವಾಸ್ತುಪೂಜೆ ಜರಗಲಿದೆ. ಫೆ.4ರಂದು ಬೆಳಗ್ಗೆ ಗಣಪತಿ ಹೋಮ, ಭಜನೆ, 10 ಗಂಟೆಗೆ ಕದ್ರಿಮಠದ ಪ್ರಧಾನ ಅರ್ಚಕ ಉಮೇಶ್ ನಾಥ್ ಇವರಿಂದ ರೋಟ್ ಪೂಜೆ ಆರಂಭವಾಗಲಿದೆ. 10.15ಕ್ಕೆ ನಾರಾಯಣ ಜೋಗಿ ಮಲ್ಲುಗುರಿ ಮಂಜೇಶ್ವರ ವೇದಿಕೆಯಲ್ಲಿ ಸಭಾಕಾರ್ಯಕ್ರಮ. ಜೋಗಿ ಸಮಾಜ ಸುಧಾರಕ ಸಂಘದ ಕಾಸರಗೋಡು ಅಧ್ಯಕ್ಷ ಗೋಪಾಲ ಕೆ.ಮಂಜೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎಸ್.ಭಾಸ್ಕರ, ನಳಿನಾಕ್ಷಿ, ರಾಮಚಂದ್ರ ಬದಿಯಡ್ಕ, ಜಯಂತ ಮಾಸ್ತರ್ ಉಪಸ್ಥಿತರಿರುವರು. ಜೋಗಿ ಸಮಾಜ ಸುಧಾರಕ ಸಂಘದ ಪೂರ್ವಾಧ್ಯಕ್ಷರುಗಳಾದ ಜನಾರ್ದನ ಮಾಸ್ತರ್ ಮುಂಡಿತ್ತಡ್ಕ, ಸಿ.ಎಚ್. ಬಾಬು ಮಾಸ್ತರ್ ಚಂಬ್ಲಿತ್ತಿಮಾರ್, ರಾಮಚಂದ್ರ ಮಾಸ್ತರ್ ಸುಳ್ಯೋಡು, ಐತ್ತಪ್ಪ ಮವ್ವಾರು, ಮಾಲಿಂಗ ಜೋಗಿ ಸಜಂಕಿ, ಮುರಹರಿ ವಿ.ಜಿ.ಬೇಳ ಗೌರವ ಉಪಸ್ಥಿತರಿರುವರು. ಮಧ್ಯಾಹ್ನ 12 ಕ್ಕೆ ಉಭಯ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, 12.15ಕ್ಕೆ ನೂತನ ಜೋಗಿ ಸಮಾಜ ಭವನ ಲೋಕಾರ್ಪಣೆ, ಪಾದ ಕಾಣಿಕೆ, ಸಮಿತಿಯ ವತಿಯಿಂದ ಗೌರವಾರ್ಪಣೆ, ಆಶೀರ್ವಚನ, ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ. ಮಧ್ಯಾಹ್ನ 1 ಕ್ಕೆ ರೋಟ್ ಪೂಜೆ ಮಂಗಳಾರತಿ, ಪ್ರಸಾದ ವಿತರಣೆ, ಭೋಜನ. ಅಪರಾಹ್ನ 2 ಕ್ಕೆ ಅಭಿನಂದನಾ ಸಭೆ, 3 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ. ಸಮಾಜಬಾಂಭವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.