ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇವರ ನೇತೃತ್ವದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆದುಬರುತ್ತಿರುವ ವಸಂತವೇದಪಾಠ ಶಿಬಿರ ಏಪ್ರಿಲ್ 3ರಂದು ಬುಧವಾರ ಆರಂಭವಾಗಲಿರುವುದು. ಆಸಕ್ತ ಯಜುರ್ವೇದ ಉಪನೀತ ವಟುಗಳು ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9746700415 ವೇದಮೂರ್ತಿ ಶಿವರಾಮ ಭಟ್ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.