ಕಣ್ಣೂರು: ಕೇರಳ ವಿಶ್ವವಿದ್ಯಾನಿಲಯ ಕಲೋತ್ಸವ ಲಂಚ ವಿವಾದದಲ್ಲಿ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಎಸ್ಎಫ್ಐಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಲೋತ್ಸವಗಳನ್ನು ಸುಂದರವಾಗಿ ಆಯೋಜಿಸಲಾಗಿತ್ತು. ಸಮಸ್ಯೆ ಸಂಘಟಕರ ಕಡೆಯಿಂದಲ್ಲ. ಅತಿಕ್ರಮಣಕಾರರೇ ಸಮಸ್ಯೆಗೆ ಕಾರಣರಾಗಿದ್ದಾರೆ ಎಂದು ಸಚಿವರು ಹೇಳಿದರು.
ಘಟನೆ ಕುರಿತು ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಜನೋತ್ಸವಗಳು ಸೌಹಾರ್ದಯುತವಾಗಿರಬೇಕು ಎಂದೂ ಸಚಿವರು ಅಭಿಪ್ರಾಯಪಟ್ಟರು. ಪೋಲೀಸ್ ತನಿಖೆಯಿಂದ ಮಾತ್ರ ವಿಷಯದ ನೈಜತೆ ತಿಳಿಯಲಿದೆ. ಏನಾಯಿತು ಎಂಬುದು ತನಿಖೆಯ ನಂತರವಷ್ಟೇ ಹೇಳಬಹುದು. ಯುವಜನೋತ್ಸವ ಪೂರ್ಣಗೊಳ್ಳದಿರುವುದು ವಿಷಾದನೀಯ ಎಂದು ಸಚಿವರು ಹೇಳಿದರು.
ಕಲೋತ್ಸವದ ವೇಳೆ ಯಾರೋ ಒಳನುಗ್ಗಿ ತೊಂದರೆ ಕೊಟ್ಟಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಮಾಹಿತಿ ಕೇಳಿದೆ. ಕಾಲೇಜುಗಳಲ್ಲಿ ಉದ್ದೇಶಪೂರ್ವಕವಾಗಿ ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಪ್ರಜ್ಞಾಪೂರ್ವಕವಾಗಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ವಿಷಯವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಸಚಿವರು ಹೇಳಿದರು.