ಮುಳ್ಳೇರಿಯ : ಅಡೂರು ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಾ.18ರಂದು ಸಂಜೆ 6ರಿಂದ ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಸದಸ್ಯರಿಂದ 'ಸಾಹಿತ್ಯ ಗಾನ ನೃತ್ಯ ವೈಭವ' ಕಾರ್ಯಕ್ರಮವು ನಡೆಯಲಿZ್ವ.
ಖ್ಯಾತ ಗಾಯಕ ಗುರುರಾಜ್ ಕಾಸರಗೋಡು ಸಹಿತ ಅನೇಕ ಮಂದಿ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗಾಯನ, ಸಮೂಹ ನೃತ್ಯ, ಸಮೂಹ ಭರತನಾಟ್ಯ, ಯಕ್ಷ ನೃತ್ಯ, ಜೋಡಿ ನೃತ್ಯ ಮೊದಲಾದ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಡಾ. ವಾಣಿಶ್ರೀ ಕಾಸರಗೋಡು ಅವರು ಕಾರ್ಯಕ್ರಮದ ಸಾಹಿತ್ಯ ಹಾಗೂ ನಿರ್ವಹಣೆಯನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ನೀಡುವ ಕಲಾ ಚೈತನ್ಯ ಗೌರವ ಪ್ರಶಸ್ತಿಯನ್ನು ಬಹುಮುಖ ಪ್ರತಿಭೆ ವರ್ಷಾ ಶೆಟ್ಟಿ ಬಂಬ್ರಾಣ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಪ್ರಕಟಣೆ ತಿಳಿಸಿದೆ.