ತಿರುವನಂತಪುರಂ: ಸಾಲ ವಸೂಲಾತಿ ಪ್ರಕರಣದಲ್ಲಿ ಕೇರಳದ ಪರವಾಗಿ ಸುಪ್ರೀಂ ಕೋರ್ಟ್ಗೆ ಹಾಜರಾಗುವ ವಕೀಲರಿಗೆ ಕೋಟಿಗಟ್ಟಲೆ ಖರ್ಚು ಮಾಡಲಾಗುತ್ತಿದೆ.
ಕೇರಳದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಬಿಲ್ ಸಿಬಲ್ ರಿಗೆ ಶುಲ್ಕವಾಗಿ 2.35 ಕೋಟಿ ರೂ. ಪಾವತಿಸಬೇಕಿದೆ. ಸರ್ಕಾರದಿಂದ ಈವರೆಗೆ 75 ಲಕ್ಷ ರೂ.ಪಾವತಿಸಲಾಗಿದೆ. 2021 ರಿಂದ ಕಾನೂನು ಸಲಹೆಗಾಗಿ ಸರ್ಕಾರ 93.90 ಲಕ್ಷ ರೂ.ಪಾವತಿಸಲಾಗಿದೆ. ಅಡ್ವೊಕೇಟ್ ಜನರಲ್ ಕಚೇರಿಯ ಅಂಕಿ-ಅಂಶಗಳು ಈ ಅವಧಿಯಲ್ಲಿ ಸುಪ್ರೀಂ ಕೋರ್ಟ್ಗೆ ಹಾಜರಾದ ವಕೀಲರಿಗೆ 8.25 ಕೋಟಿ ರೂ.ನೀಡಿರುವುದನ್ನು ಬಯಲುಗೊಳಿಸಿದೆ.
ಶುಹೈಬ್ ಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ತಪ್ಪಿಸಲು ಸರ್ಕಾರ ವಕೀಲರಿಗೆ 96,34,261 ರೂ. ನೀಡಿದೆ. ಕಾಸರಗೋಡು ಪೆರಿಯಾದಲ್ಲಿ ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆ ಪ್ರಕರಣದಲ್ಲಿ ಸಿಪಿಎಂ ಆರೋಪಿಗಳ ಪರ ವಾದಿಸಲು ಸರ್ಕಾರ ಹೊರಗಿನ ವಕೀಲರನ್ನು ನಿಯೋಜಿಸಿದೆ. ಈ ಪ್ರಕರಣದಲ್ಲಿ ವಕೀಲರಿಗೆ 1,14,83,132 ಕೋಟಿ ರೂ.ವೆಚ್ಚಮಾಡಲಾಗಿದೆ.
ಹೈಕೋರ್ಟ್ನಲ್ಲಿ ಹಾಜರಾದ ವಕೀಲರಿಗೆ ಶುಲ್ಕವಾಗಿ 88 ಲಕ್ಷ ರೂ.ನೀಡಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಪೆರಿಯಾ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಿದ್ದಕ್ಕಾಗಿ ಮಣಿಂದರ್ ಸಿಂಗ್ಗೆ 24.50 ಲಕ್ಷ ರೂ.ನೀಡಲಾಗಿದೆ. ಶುಹೈಬ್ ಮತ್ತು ಪೆರಿಯಾ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಿಪಿಎಂ ಕಾರ್ಯಕರ್ತರ ಪರವಾಗಿ ಸರ್ಕಾರದ ಬೊಕ್ಕಸದಿಂದ 2,11,17,393 ರೂ.(2.11 ಕೋಟಿ)ಒಟ್ಟು ಖರ್ಚು ಮಾಡಲಾಗಿದೆ ಎಂದು ಸರ್ಕಾರ ವಿಧಾನಸಭೆಗೆ ಮಾಹಿತಿ ನೀಡಿತ್ತು.