HEALTH TIPS

LS polls | ವಯನಾಡ್‌: ಕಾಂಗ್ರೆಸ್‌ ಮುಖಂಡ ಸುಧಾಕರನ್‌ ಬಿಜೆಪಿಗೆ ಸೇರ್ಪಡೆ

              ಯನಾಡ್‌: ಕಾಂಗ್ರೆಸ್‌ನ ವಯನಾಡ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸುಧಾಕರನ್‌ ಅವರು ಶನಿವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

                ಬಳಿಕ ಮಾತನಾಡಿದ ಅವರು, 'ವಯನಾಡ್‌ ಸಂಸದ ರಾಹುಲ್‌ ಗಾಂಧಿ ಅವರು ಪಕ್ಷದ ಜಿಲ್ಲಾ ಮುಖಂಡರಿಗೂ ಲಭ್ಯರಿರಲಿಲ್ಲ.

                 ಹಾಗಾದರೆ ಸಾಮಾನ್ಯ ಜನರ ಸ್ಥಿತಿ ಏನು? ಅವರಿಗೆ ಕ್ಷೇತ್ರದ ಜನರು ಐದು ವರ್ಷ ಅವಕಾಶ ನೀಡಿದ್ದಾರೆ. ಇನ್ನೊಂದು ಅವಧಿಗೂ ಅವರೇ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಕುರಿತ ನಿರೀಕ್ಷೆಗಳು ಹುಸಿಯಾಗಬಹುದು' ಎಂದು ಹೇಳಿದರು.

             ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ರಾಹುಲ್‌ ಅವರು ಘೋಷಿಸಲಿ ಎಂದೂ ಸವಾಲು ಹಾಕಿದರು.

                 ಇತರ ಇಬ್ಬರು ಪ್ರಮುಖ ನಾಯಕರೂ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದರು. ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಸ್ಪರ್ಧಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries