HEALTH TIPS

ನುಳ್ಳಿಪ್ಪಾಡಿಯಲ್ಲಿ ಅಂಡರ್‍ಪಾಸ್ : ಮುಷ್ಕರ ಸಮಿತಿಯಿಂದ ತೀವ್ರ ಹೋರಾಟ

           ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನುಳ್ಳಿಪ್ಪಾಡಿಯಲ್ಲಿ ಅಂಡರ್‍ಪಾಸ್ ನಿರ್ಮಿಸಬೇಕೆಂದು ಆಗ್ರಹಿಸಿ ಮುಷ್ಕರ ಸಮಿತಿ ನಡೆಸುವ ಆಂದೋಲನ ಮೂರನೇ ಹಂತಕ್ಕೆ ತಲುಪಿದೆ. 

            ಇಲ್ಲಿ ಅಂಡರ್‍ಪಾಸ್ ಇಲ್ಲದ ಕಾರಣದಿಂದ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಸಂಚಾರ ಸ್ವಾತಂತ್ರ್ಯವನ್ನು ನಿಷೇಧಿಸುವ ರೀತಿಯಲ್ಲಿ ಹೆದ್ದಾರಿ ನಿರ್ಮಿಸಲಾಗಿದೆಯೆಂದು ಮುಷ್ಕರ ಸಮಿತಿ ಆರೋಪಿಸಿದೆ. ಅಂಡರ್‍ಪಾಸ್ ನಿರ್ಮಾಣ ಬೇಡಿಕೆ ಮುಂದಿಟ್ಟು ಅಧಿಕಾರಿಗಳನ್ನು ಸಮೀಪಿಸಿದರೂ ತೀರ್ಮಾನ ಉಂಟಾಗದ ಹಿನ್ನೆಲೆಯಲ್ಲಿ ಇಲ್ಲಿ ಕಾಮಗಾರಿಯನ್ನು ಮೊಟಕುಗೊಳಿಸುವ ಮುಷ್ಕರದತ್ತ ಸಮಿತಿ ಹೆಜ್ಜೆಯಿರಿಸಿದೆ. 

         ಕಾಸರಗೋಡು ನಗರಕ್ಕೆ ಕಿಲೋ ಮೀಟರ್‍ಗಳಷ್ಟು ದೂರ ಸಂಚರಿಸಿ ತೆರಳಬೇಕಾಗಿದ್ದು, ಹಲವು ಬಾರಿ ಜಿಲ್ಲಾ„ಕಾರಿ ಈ ವಿಷಯ ಮನದಟ್ಟು ಮಾಡಿಯೂ ಯಾವುದೇ ಕ್ರಮ ಉಂಟಾಗಲಿಲ್ಲ. ಜನರ ಬೇಡಿಕೆಯನ್ನು ಪರಿಗಣಿಸದೆ ನಿರ್ಮಾಣ ನಡೆಸುವುದಾದರೆ ತೀವ್ರ ಹೋರಾಟ ನಡೆಸುವುದಾಗಿ ಮುಷ್ಕರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಪಿ.ರಮೇಶ್, ಅನಿಲ್ ಚೆನ್ನಿಕ್ಕರ, ಆರ್.ಎಸ್.ನುಳ್ಳಿಪ್ಪಾಡಿ,  ವರ ಪ್ರಸಾದ ಕೋಟೆಕಣಿ ಮೊದಲಾದವರು ನೇತೃತ್ವ ನೀಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries