HEALTH TIPS

ಮಗುವನ್ನು ವಿಚಾರಣೆಗೆ ಹಾಜರುಪಡಿಸಿ: ಟೆಕಿ ಅತುಲ್ ಪತ್ನಿಗೆ ಸುಪ್ರೀಂಕೋರ್ಟ್ ತಾಕೀತು

 ನವದೆಹಲಿ: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ಅವರ ಪತ್ನಿಗೆ, ತಮ್ಮ ಮಗುವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ಸುಭಾಷ್ ಅವರ ತಾಯಿ ಅಂಜು ದೇವಿ ಅವರು, ನಾಲ್ಕು ವರ್ಷ ವಯಸ್ಸಿನ ಮೊಮ್ಮಗನನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್‌ ಚಂದ್ರ ಶರ್ಮಾ ಅವರನ್ನು ಒಳಗೊಂಡ ನ್ಯಾಯಪೀಠವು ನಡೆಸಿತು.

'ಇದು ಹೇಬಿಯಸ್‌ ಕಾರ್ಪಸ್‌ ಅರ್ಜಿ. ನಾವು ಮಗುವನ್ನು ನೋಡಬೇಕಿದ್ದು, ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಿ' ಎಂದು ಪೀಠವು ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾ ಪರ ವಕೀಲರಿಗೆ ತಿಳಿಸಿತು.

ಮಗುವನ್ನು ಶಾಲೆಯಿಂದ ಬಿಡಿಸಲಾಗಿದ್ದು, ಅದು ಸದ್ಯ ತನ್ನ ತಾಯಿಯೊಂದಿಗೆ ವಾಸವಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಜ.7ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಮಗುವಿನ ಪಾಲಿಗೆ ಅರ್ಜಿದಾರರು ಅಪರಿಚಿತರು ಎಂದು ಹೇಳಿ ಮನವಿಯನ್ನು ತಿರಸ್ಕರಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries