ಮಂಜೇಶ್ವರ: ಕುಳೂರು ಸಂತಡ್ಕ ಶ್ರೀಅರಸು ಸಂಕಲ ದ್ಯೆವ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದಿನಿಂದ (ಜ.19) 24 ರವರೆಗೆ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕುಡುಪು ಬ್ರಹ್ಮಶ್ರೀ ನರಸಿಂಹ ತಂತ್ರಿ ಹಾಗೂ ಕುಳೂರು ಯೋಗೀಶ ಕಲ್ಯಾಣತ್ತಾಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅರಸು ಸಂಕಲ ದ್ಯೆವಕ್ಷೇತ್ರ ಆಡಳಿತ ಟ್ರಸ್ಟ್ ಮತ್ತು ಸೇವಾ ಸಮಿತಿ ಅಧ್ಯಕ್ಷ ಡಾ.ಎಂ.ಶ್ರೀಧರ ಭಟ್ ಅವರು ಶನಿವಾರ ಶ್ರೀದೈವ ಕ್ಷೇತ್ರ ಆವರಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದು ಅಪರಾಹ್ನ 3 ರಿಂದ ಹೊರೆಕಾಣಿಕೆ ಮೆರವಣಿಗೆ, ಸಂಜೆ 6 ರಿಂದ ಧಾರ್ಮಿಕ ಸಭೆ, ರಾತ್ರಿ 8.30 ರಿಂದ ನೃತ್ಯವ್ಯೆವಿಧ್ಯ ನಡೆಯಲಿದೆ
ನಾಳೆ(ಜ.: 20)ಬೆಳಿಗ್ಗೆ ತಂತ್ರಿಗಳ ಆಗಮನ, ವ್ಯೆದಿಕ ಕಾರ್ಯಕ್ರಮ, ರಾತ್ರಿ 7 ರಿಂದ ಹನುಮಗಿರಿ ಮೇಳದ ಬಯಲಾಟ ನಡೆಯಲಿದೆ.
ಜ.21 ರಂದು ಬೆಳಿಗ್ಗೆ ಶ್ರೀದೈವಗಳ ಭಂಡಾರ ಆಗಮನ, ಬಿಂಬ ಶುದ್ಧಿಕಲಶ ನಡೆಯಲಿದೆ. ಸಂÀಜೆ 4 ರಿಂದ ತಾಳಮದ್ದಳೆ, 7 ರಿಂದ ಮಾತೃಸಂಗಮ, ರಾತ್ರಿ 9 ರಿಂದ ಚಾಪರ್ಕ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಲಿದೆ.
ಜ.22 ರಂದು ಬೆಳಿಗ್ಗೆ 8 ರಿಂದ 8.30 ರ ರ ಮುಹೂರ್ತದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ.ಬೆಳಿಗ್ಗೆ 10.30 ರಿಂದ ಧಾರ್ಮಿಕ ಸಭೆ ನಡೆಯಲಿದೆ.
ಮಧ್ಯಾಹ್ನ ಸಾಂಸ್ಕøತಿಕ ಕಾರ್ಯಕ್ರಮಗಳು ಭಕ್ತಿಗಾನ ಸುಧಾ, ಸಂಜೆ 6 ರಿಂದ ಶ್ರೀ ಕಲಾರತ್ನ ಶಂನಾಡಿಗ ಕುಂಬ್ಳೆ ಇವರಿಂದ 6 ಹರಿಕಥೆ, ರಾತ್ರಿ 8. ರಿಂದ ಬೆನಕ ಆಟ್ರ್ಸ್ ಕುಡ್ಲ ಕಲಾವಿದರಿಂದ ಪೌರಾಣಿಕ ತುಳು ನಾಟಕ “ಪೆÇರಿಪುದಪ್ಪೆ ಜಲದುರ್ಗೆ” ಪ್ರದರ್ಶನಗೊಳ್ಳಲಿದೆ. ಜ.23 ರಂದು ಬೆಳಿಗ್ಗೆ 11 ರಿಂದ ಶ್ರೀ ಅರಸು ಸಂಕಲ ಅಣ್ಣ ದೈವಗಳ ನೇಮೋತ್ಸವ, ಮಧ್ಯಾಹ್ನ 1 ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7 ರಿಂದ ಶ್ರೀ ಅರಸು ಸಂಕಲ ತಮ್ಮ ದೈವಗಳ ನೇಮೋತ್ಸವ, ಒಲಸರಿ ಉತ್ಸವ, ರಾತ್ರಿ 9. ರಿಂದ ಮಕ್ಕಳ ಯಕ್ಷಗಾನ ಬಯಲಾಟ ನಡೆಯಲಿದೆ.
ಜ. 24 ರಂದು ಬೆಳಿಗ್ಗೆ 9 ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ, ಸಂಜೆ 5 ರಿಂದ
ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ, ರಾತ್ರಿ 8.30 ರಿಂದ ನೃತ್ಯ ರೂಪಕ, ರಾತ್ರಿ 9 ರಿಂದ ಶ್ರೀ ಧೂಮಾವತಿ ಬಂಟ ದೈವಗಳ ಒಲಸರಿ ಉತ್ಸವ, ರಾತ್ರಿ 12 ರಿಂದ ಶ್ರೀ ಕೊರತಿ ಗುಳಿಗ ದೈವಗಳ ಕೋಲೋತ್ಸವ, ಭಂಡಾರ ಇಳಿಯುವುದರೊಂದಿಗೆ ಸಮಾರಂಭ ಕೊನೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರ.ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಕಲ್ಲಾಯಿ, ಅರವಿಂದಾಕ್ಷ ಭಂಡಾರಿ, ಕೋಶಾಧಿಕಾರಿ ಎಂ.ಜಿ. ನಾರಾಯಣ ರಾವ್ , ಸದಸ್ಯರಾದ ಸಾಹಿತ್ ಶೆಟ್ಟಿ, ನಾರಾಯಣ ಭಂಡಾರಿ ಉಪಸ್ಥಿತರಿದ್ದರು.





