HEALTH TIPS

ಕಾನ ಮಠ: ಹೊಸ್ತಿನ ದೇವಕಾರ್ಯ ಸಂಪನ್ನ-ಇಂದು ಶ್ರೀಧೂಮಾವತಿ ದೈವದ ಕೋಲ

ಕುಂಬಳೆ: ನಾರಾಯಣಮಂಗಲ ಸಮೀಪದ ಕಾನಮಠ ಶ್ರೀಶಂಕರನಾರಾಯಣ ದೇವರ ಮಠದಲ್ಲಿ ವಾರ್ಷಿಕ ಹೊಸ್ತಿನ ದೇವಕಾರ್ಯ ವಿವಿಧ ಕಾರ್ಯಕ್ರಮಗಳೊಂದಿಗೆ ಶನಿವಾರ ಸಂಪನ್ನಗೊಂಡಿತು. ಇಂದು  ಶ್ರೀಧೂಮಾವತಿ ದೈವದ ಕೋಲ ನಡೆಯಲಿದೆ.

ನಿನ್ನೆ (ಶನಿವಾರ) ಬೆಳಿಗ್ಗೆ 6.30ಕ್ಕೆ ಆಚಾರ್ಯರಿಂದ ಗಣಪತಿ ಹವನ, ಪಂಚಗವ್ಯ ಹವನ, ನವಕಾಭಿಷೇಕ, 8 ಕ್ಕೆ ಸಾಮೂಹಿಕ ರುದ್ರ ಪಾರಾಯಣ, 10.30ರಿಂದ ತುಲಾಭಾರ ಸೇವೆ, 11 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ದೇವಕಾರ್ಯ, ಅನ್ನಸಂತರ್ಪಣೆ ನಡೆಯಿತು. ಸಂಜೆ 7.30ಕ್ಕೆ ಭಂಡಾರ ಕೊಟ್ಟಗೆಯಿಂದ ಶ್ರೀಧೂಮಾವತಿ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಲ ಮುಗಿಸಿ ಶ್ರೀಶಂಕರನಾರಾಯಣ ದೇವರ ಮಠಕ್ಕೆ ಆಗಮನ, ಮಹಾಪೂಜೆ, ಶ್ರೀಧೂಮಾವತಿ ದೈವದ ತೊಡಂಙಲ್ ನಡೆಯಿತು. ಜ.26 ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಶ್ರೀಧೂಮಾವತಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ. . 

ಶುಕ್ರವಾರ ಬೆಳಿಗ್ಗೆ 7 ಕ್ಕೆ ಶ್ರೀಧೂಮಾವತಿ ದೈವ ಸನ್ನಿಧಿಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, ಶ್ರೀಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ 10 ಕ್ಕೆ ಕೊಪ್ಪರಿಗೆ ಮುಹೂರ್ತ ನೆರವೇರಿತು. ರಾತ್ರಿ 8 ರಿಂದ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯವರಿಂದ ಯಕ್ಷಗಾನ ಬಯಲಾಟ ನಡೆಯಿತು.

ಹವ್ಯಕ ಸಮಾಜದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಕಾನಮಠದಲ್ಲಿ ನಿನ್ನೆ ಎರಡು ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡಿದ್ದರು. ಕುಂಬಳೆ ಸೀಮೆಯಷ್ಟೇ ಅಲ್ಲದೆ, ನೆರೆಯ ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು, ಕೇರಳದ ಪಾಲ್ಘಾಟ್, ಕೊಚ್ಚಿ, ಪತ್ತನಂತಿಟ್ಟ ಮೊದಲಾದೆಡೆಗಳ ಮೂಲ ಕಾನ ಮಠಕ್ಕೆ ಸೇರಿದವರು ಆಗಮಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries