ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭ ಬೆಂಗಳೂರು ಅಮೃತವರ್ಷಿಣಿ ಸಂಗೀತ ವಿದ್ಯಾಲಯದ ಗುರುಗಳಾದ ವಿದುಷಿ ಜಯಲಕ್ಷ್ಮೀ ಎಸ್. ಭಟ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ 11 ಮಂದಿ ಶಿಷ್ಯವೃಂದದವರಿಂದ ಸಂಗೀತಾರಾಧನೆ ನಡೆಯಿತು. ಪಕ್ಕವಾದ್ಯಗಳಲ್ಲಿ ವಿದ್ವಾನ್ ಈಶ್ವರ ಭಟ್ ಬಿ.ಜಿ., ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಬಾಲರಾಜ್ ಬೆದ್ರಡಿ ಸಹಕರಿಸಿದರು.

.jpg)
