ಪೆರ್ಲ: ಪೆರ್ಲ ಪೇಟೆಯ ಚೆಕ್ಪೋಸ್ಟ್ ವಠಾರದಲ್ಲಿ ಅಂತಾರಾಜ್ಯ ಹೆದ್ದಾರಿಗೆ ಹೊಂದಿಕೊಂಡು ತಲೆಯೆತ್ತಿರುವ 'ಶ್ರೀಮಾತಾ ಆರ್ಕೇಡ್' ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಜ. 20ರಂದು ಬೆಳಗ್ಗೆ ಜರುಗಲಿದೆ.
ಎಡನೀರು ಮಠಾಧೀಶ ಶ್ರೀ ಸಚ್ಚಿದನಂದ ಭಾರತೀ ಸ್ವಾಮೀಜಿ ನೂತನ ಕಟ್ಟಡ ಲೋಕರ್ಪಣೆಗೈದು, ಮಂತ್ರಾಕ್ಷತೆ ನೀಡಿ ಹರಸಲಿದ್ದಾರೆ. ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಅತಿಥಿಯಾಗಿ ಪಾಲ್ಗೊಳ್ಳುವರು.
ಸುಸಜ್ಜಿತ ಹಾಗೂ ಬಹು ಅಂತಸ್ತಿನ ಶ್ರಿಮಾತಾ ಆರ್ಕೇಡ್ನಲ್ಲಿ ಶುದ್ಧ ಸಸ್ಯಾಹಾರಿ ಹೋಟೆಲ್ ಆರಂಭಗೊಳ್ಳಲಿದೆ. ಬಟ್ಟೆ ಅಂಗಡಿ, ವೈದ್ಯರ ಕ್ಲಿನಿಕ್, ವಿವಿಧ ಕಚೇರಿ, ಡಿಜಿಟಲ್ ಪ್ರಿಂಟಿಂಗ್-ಪ್ಲೆಕ್ಸ್ ಬೋರ್ಡ್ ತಯಾರಿ ಸಂಸ್ಥೆ, ವಾಹನಗಳ ಬಿಡಿಭಾಗ ಮಾರಾಟ ಕೇಂದ್ರ ಸೇರಿದಂತೆ ವಿವಿಧ ವ್ಯಾಪಾರಿ ಮಳಿಗೆ ಕಾರ್ಯಾಚರಿಸಲಿದೆ. ಜತೆಗೆ ದೂರದೂರಿಂದ ಆಗಮಿಸುವವರ ಸೌಕರ್ಯಕ್ಕಾಗಿ ಸುಸಜ್ಜಿತ ಮಿನಿ ಸಭಾಂಗಣ ವ್ಯವಸ್ಥೆಯೊಂದಿಗೆ ವಸತಿಗೃಹವೂ ಕಾರ್ಯಾರಂಭಗೊಳ್ಳಲಿದೆ.





