HEALTH TIPS

ಚಿನ್ನಕನಾಲ್‍ನಲ್ಲಿ ಭಯಭೀತಿ ಸೃಷ್ಟಿಸಿದ ಒಂಟಿ ಸಲಗ: ಮನೆಗಳ ಧ್ವಂಸ: ಮರಯೂರ್ ಚಿನ್ನಾರ್ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನ ಮುಂದೆ ಕಾಣಿಸಿಕೊಂಡ ಕಾಡಾನೆ

ಇಡುಕ್ಕಿ: ಚಿನ್ನಕನಾಲ್ 301 ನೇ ಕಾಲೋನಿಯಲ್ಲಿ ಒಂಟಿಸಲಗವೊಂದು ನಿನ್ನೆ ತೀವ್ರ ಭಯ ಹುಟ್ಟಿಸಿದೆ. ಕಲ್ಲುಪರಂಬಿಲ್‍ನಲ್ಲಿ ಸಾವಿತ್ರಿ ಕುಮಾರನ್ ಮತ್ತು ಲಕ್ಷ್ಮಿ ನಾರಾಯಣನ್ ಅವರ ಮನೆಗಳನ್ನು ಕಾಡಾನೆಯೊಂದು ಧ್ವಂಸಗೊಳಿಸಿದೆ.


ಈ ದಾಳಿ ನಿನ್ನೆ ಬೆಳಗಿನ ಜಾವ ನಡೆದಿದೆ. ಸಾವಿತ್ರಿ ಕುಮಾರನ್ ಅವರ ಮನೆಯ ಅಡುಗೆಮನೆ ಮತ್ತು ಲಕ್ಷ್ಮಿ ನಾರಾಯಣನ್ ಅವರ ಮನೆಯ ಮುಂಭಾಗ ದ್ವಂಸಗೊಂಡಿದೆ. ಮನೆಯಲ್ಲಿದ್ದವರು ಆಸ್ಪತ್ರೆಯಲ್ಲಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಪ್ರದೇಶದಲ್ಲಿ ವ್ಯಾಪಕ ಬೆಳೆ ಹಾನಿಯೂ ವರದಿಯಾಗಿದೆ.

ಈ ಮಧ್ಯೆ, ಇಡುಕ್ಕಿ ಮರಯೂರ್ ಚಿನ್ನಾರ್ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನ ಮುಂದೆ ಕಾಡಾನೆಯೊಂದು ಬಂದ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಈ ಪ್ರದೇಶಕ್ಕೆ ಬಂದಿದ್ದ ವಿರಿಂಜ ಕೊಂಬನ್ ಎಂದು ಕರೆಯಲ್ಪಡುವ ಕಾಡು ಆನೆಯು ಬಸ್ಸಿನ ಮುಂದೆ ನಿಂತಿತು. ತಿರುವನಂತಪುರಂ-ಪಳನಿ ಸೇವೆಯನ್ನು ನಿರ್ವಹಿಸುವ ಕೆಎಸ್‍ಆರ್‍ಟಿಸಿ ಬಸ್‍ನ ಮುಂದೆ ಸ್ವಲ್ಪ ಹೊತ್ತು ರಸ್ತೆಯಲ್ಲಿ ನಿಂತಿದ್ದ ಕಾಡಾನೆ, ಯಾವುದೇ ಹಿಂಸಾಚಾರ ಉಂಟುಮಾಡದೆ ಹತ್ತಿರದ ಕಾಡಿಗೆ ಓಡಿ ಪರಾರಿಯಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries