HEALTH TIPS

ಪೆರುಂಬಳ ಸೇತುವೆಯಿಂದ ಹೊಳೆಗೆ ಹಾರಿದ್ದ ಯುವಕನ ಮೃತದೇಹ ಪತ್ತೆ

ಕಾಸರಗೋಡು: ಪೆರುಂಬಳ ಸೇತುವೆಯಿಂದ ಚಂದ್ರಗಿರಿ ಹೊಳೆಗೆ ಹಾರಿದ್ದ  ಚೆಂಗಳ ಪಡಿಙËರ್‍ಮೂಲೆ ಬಾಫಕಿನಗರದ ಕಣ್ಣರ ನಿವಾಸಿ ಮಹಮ್ಮದ್ ಎಂಬವರ ಪುತ್ರ ಶೆರೀಫ್(45)ಅವರ ಮೃತದೇಹ ಸೇತುವೆ ಸನಿಹದ ಹೊಳೆಯಲ್ಲಿ ಪತ್ತೆಯಾಗಿದೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಊರವರು ನಡೆಸಿದ ಹುಡುಕಾಟದಿಂದ ಮೃತೇಹ ಪತ್ತೆಹಚ್ಚಲಾಗಿದೆ.

ಶೆರೀಫ್ ಮಂಗಳವಾರದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸುದಾಖಲಿಸಿಕೊಂಡಿದ್ದರು. ಈ ಮಧ್ಯೆ ಶರೀಫ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಅವರು ಧರಿಸಿದ್ದ ಚಪ್ಪಲಿ ಪೆರುಂಬಳ ಸೇತುವೆ ಬಳಿ ಪತ್ತೆಯಾಗಿದ್ದು, ಶೆರೀಫ್ ನೀರುಪಾಲಾಗಿರುವ ಬಗ್ಗೆ ಸಂಶಯದಿಂದ ಗುರುವಾರ ಬೆಳಗ್ಗಿನಿಂದಲೇ ಹುಡುಕಾಟ ಆರಂಭಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries