ಮಧೂರು : ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ವಾರ್ಷಿಕ ಜಾತ್ರೆಯ ಆರಾಟ್ ಮಹೋತ್ಸವದ ಅಂಗವಾಗಿ ಮನ್ನಿಪ್ಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಷನ್ ತಿರುವಾದಿರ ನೆರವೇರಿತು.
ಓಮನ ರವಿ, ಪೂರ್ಣಿಮಾ ರಾಜೇಶ್, ಕುಮಾರಿ ಅನುಶ್ರೀ, ಶೀಬಾ ಸತೀಶ್, ಲತಾ ವಸಂತ, ವಿನಿತಾ ರಾವ್, ಅಶ್ವಿನಿ ಶರತ್, ಡಾ. ಚೈತ್ರ ರವಿ, ಡಾ. ಮೃದುಲ ರಾಘವನ್, ಧನಶ್ರೀ, ರಮ್ಯ, ಅಮಿತಾ ಶರತ್, ಸೌಮ್ಯ ಸುನೀಶ್, ಪ್ರಶಾಂತಿ ದೇವದಾಸ್ ತಿರುವಾದಿರ ನಡೆಸಿಕೊಟ್ಟರು. ಉದಯಕುಮಾರ್ ಮನ್ನಿ ಪಾಡಿ, ನಾರಾಯಣ ಬೋವಿಕಾನ, ವಸಂತ ಕಾಂತಿಕೆರೆ ಕಾರ್ಯಕ್ರಮಕ್ಕೆ ಸಹಕರಿಸಿದರು. ತಿರುಆದಿರ ತಂಡಕ್ಕೆ ದೇವಸ್ಥಾನದ ಸಮಿತಿ ಪದಾಧಿಕಾರಿಗಳು ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.





