HEALTH TIPS

ಕೇರಳ ಕಿಸಾನ್ ಸಂಘದ ರಾಜ್ಯ ಸಮಿತಿಯ ಕೃಷಿ ಪುನರುಜ್ಜೀವನ ಯಾತ್ರೆ ಇಂದಿನಿಂದ

ಕುಂಬಳೆ:  ರಾಜ್ಯದಲ್ಲಿನ ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಕೇರಳಕ್ಕೆ ಕೃಷಿ ಪರ್ಯಾಯವನ್ನು ಪ್ರಸ್ತಾಪಿಸಲು ಭಾರತೀಯ ಕಿಸಾನ್ ಸಂಘ ರಾಜ್ಯ ಸಮಿತಿಯು ಆಯೋಜಿಸಿರುವ ಕೃಷಿ ಪುನರುಜ್ಜೀವನ ಯಾತ್ರೆ ಮಂಜೇಶ್ವರದಲ್ಲಿ ಇಂದಿನಕಿಂದ ಪ್ರಾರಂಭವಾಗಲಿದೆ ಎಂದು ಕಿಸಾನ್ ಸಂಘ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಏಪ್ರಿಲ್ 2 ರಂದು ಬೆಳಿಗ್ಗೆ 9 ಕ್ಕೆ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದಿಂದ ಪ್ರಾರಂಭವಾಗಿ 28 ರಂದು ತಿರುವನಂತಪುರದ ಗಾಂಧಿ ಪಾರ್ಕ್‍ನಲ್ಲಿ ಮುಕ್ತಾಯಗೊಳ್ಳಲಿದೆ.

ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಡಾ.ಅನಿಲ್ ವೈದ್ಯಮಂಗಳಂ ನೇತೃತ್ವದಲ್ಲಿ ಯಾತ್ರೆ ಹದಿನಾಲ್ಕು ಜಿಲ್ಲೆಗಳು, 152 ಬ್ಲಾಕ್‍ಗಳು ಮತ್ತು ಸಾವಿರಾರು ಹಳ್ಳಿಗಳ ಮೂಲಕ ಹಾದುಹೋಗುವ 2,500 ಕಿಲೋಮೀಟರ್‍ಗಳಷ್ಟು ದೂರ ಪ್ರಯಾಣಿಸಲಿದೆ.

ಪ್ರಯಾಣದ ಭಾಗವಾಗಿ, ಅವರು ಕೃಷಿ ಸಂಶೋಧನಾ ಸಂಸ್ಥೆಗಳು, ತೋಟಗಳು ಮತ್ತು À ಹೊಲಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಎರಡು ಲಕ್ಷ ರೈತರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ.

ಪ್ರಯಾಣದ ಭಾಗವಾಗಿ, ವಿವಿಧ ಸ್ಥಳಗಳಲ್ಲಿ ರೈತರನ್ನು ಸನ್ಮಾನಿಸಲಾಗುವುದು. ಕೃಷಿ ಗ್ರಾಮೋತ್ಸವವು ಏಪ್ರಿಲ್ 14 ರಂದು ಗುರುವಾಯೂರಿನಲ್ಲಿ ನಡೆಯಲಿದೆ. ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ಕಾರ್ಯದರ್ಶಿ ದಿನೇಶ್ ದತ್ತಾತ್ರೇಯ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 

ಭೂಸುಧಾರಣಾ ನೀತಿ, ಅರಣ್ಯ ಕಾನೂನುಗಳು, ಭೂಸ್ವಾಧೀನ ನಿಯಮಗಳು ಮತ್ತು ನಿಬಂಧನೆಗಳು, ಜೌಗು ಪ್ರದೇಶ ಕಾನೂನುಗಳು, ಹವಾಮಾನ ಬದಲಾವಣೆ, ವನ್ಯಜೀವಿಗಳ ದಾಳಿ, ಕೀಟನಾಶಕಗಳು ಮತ್ತು ರಸಗೊಬ್ಬರಗಳ ಅತಿಯಾದ ಬಳಕೆ ಮತ್ತು ಹೆಚ್ಚಿದ ಕಾರ್ಮಿಕ ವೆಚ್ಚಗಳು ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿವೆ.ಇದರ ನಿವಾರಣೆಗೆ ಆಡಳಿತ ರೂಢರನ್ನು ಎಚ್ಚರಿಸುವುದು ಯಾತ್ರೆಯ ಉದ್ದೇಶ ಎಂದು ನಾಯಕರು ತಿಳಿಸಿರು. 

ರೈತರನ್ನು ದೇಶ ಸೇವಕರೆಂದು ಘೋಷಿಸುವುದು, ಕೃಷಿ ಸಾಲಗಳನ್ನು ಬಡ್ಡಿರಹಿತಗೊಳಿಸುವುದು, ಕೃಷಿ ಉದ್ದೇಶಗಳಿಗಾಗಿ ವಿದ್ಯುತ್ ಮತ್ತು ಮೂಲ ವೆಚ್ಚಗಳನ್ನು ಉಚಿತಗೊಳಿಸುವುದು, 60 ವರ್ಷ ತುಂಬಿದ ಅರ್ಹ ರೈತರಿಗೆ 25,000 ರೂ. ಪರಿಹಾರ, ಕೃಷಿ ಭೂಮಿಯ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕುವುದು ಮತ್ತು ಕಾಡು ಪ್ರಾಣಿಗಳ ದಾಳಿಯನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದು ಸಂಘ ನಡೆಸುವ ಯಾತ್ರೆಯ ಲಕ್ಷ್ಯವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ, ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ರಾಮ ಎನ್. ಕಳತ್ತೂರ್,

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿನೋದ್ ಕುಮಾರ್ ಬಾಯಾರ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಕುಂuಟಿಜeಜಿiಟಿeಜ್ಞ ರಾಮನ್ ನಂಬಿಯಾರ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries