HEALTH TIPS

ಉತ್ತರ ಪ್ರದೇಶ: 'ದಪ‍್ಪಗಿದ್ದೀಯ' ಎಂದು ಗೇಲಿ ಮಾಡಿದ್ದಕ್ಕೆ ಗುಂಡಿನ ದಾಳಿ

ಲಖನೌ: 'ದಪ‍್ಪಗಿದ್ದೀಯ' ಎಂದು ಗೇಲಿ ಮಾಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಇಬ್ಬರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಅನಿಲ್‌ ಚೌಹಾಣ್‌ನನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕೆಲ ದಿನಗಳ ಹಿಂದೆ ದೇವಾಲಯವೊಂದರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್‌ ಮತ್ತು ಶುಭಮ್ ಯಾದವ್‌ ಅವರು ಅನಿಲ್ ಚೌಹಾಣ್‌ ಅವರಿಗೆ 'ನೀನು ದಪ್ಪಗಿದ್ದೀಯ' ಎಂದು ಹೇಳಿದ್ದರು. ಇದರಿಂದ ಚೌಹಾಣ್‌ ಕೋಪಗೊಂಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

'ಮೋಟಾರು ಬೈಕಿನಲ್ಲಿದ್ದ ಇಬ್ಬರನ್ನು ಆರೋಪಿಯು ಕಾರಿನಲ್ಲಿ ಬೆನ್ನಟ್ಟಿದ್ದು, ಸುಮಾರು 20 ಕಿ.ಮೀ. ಕ್ರಮಿಸಿದ ಬಳಿಕ ಅವರನ್ನು ತಡೆದು ಗುಂಡಿನ ದಾಳಿ ನಡೆಸಿದ್ದಾರೆ' ಎಂದು ಮೂಲಗಳು ಹೇಳಿವೆ.

'ಅವರು ನನ್ನ ಬಗ್ಗೆ ಸಾರ್ವಜನಿಕವಾಗಿ ಗೇಲಿ ಮಾಡಿದ್ದರು. ಅವರ ಮಾತುಗಳಿಂದ ನನಗೆ ನೋವಾಗಿತ್ತು. ಬಳಿಕ ಅವರಿಗೆ ಪಾಠ ಕಲಿಸಲು ನಿರ್ಧರಿಸಿದ್ದೆ' ಎಂದು ಚೌಹಾಣ್‌ ಪೊಲೀಸರಿಗೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries