HEALTH TIPS

ಆಪರೇಷನ್‌ ಸಿಂಧೂರ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ : 'ಆಪರೇಷನ್‌ ಸಿಂಧೂರ' ಹೆಸರಿನಲ್ಲಿ ಟ್ರೇಡ್‌ಮಾರ್ಕ್‌ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ದೇವ್‌ ಆಶಿಶ್ ದುಬೆ ಎಂಬವರು ವಕೀಲ ಓಂ ಪ್ರಕಾಶ್‌ ‍ಪರಿಹಾರ್‌ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ.

'ಆಪರೇಷನ್‌ ಸಿಂಧೂರ ಎಂಬುದು ದೇಶವಾಸಿಗಳ ಭಾವನೆ ಮಾತ್ರವಲ್ಲದೇ, ದೇಶಕ್ಕಾಗಿ ಉಸಿರು ಚೆಲ್ಲಿದವರ ತ್ಯಾಗ, ಪಹಲ್ಗಾಮ್‌ನಲ್ಲಿ ಹತ್ಯೆಗೀಡಾದ ಅಮಾಯಕರ ಸಾವಿನ ಆಕ್ರೋಶವನ್ನೂ ಒಳಗೊಂಡಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಯೋಧರ ಪತ್ನಿಯರ ತ್ಯಾಗದ ಪ್ರತೀಕವಾಗಿರುವ 'ಆಪರೇಷನ್‌ ಸಿಂಧೂರ' ಹೆಸರು ಜನರ ಭಾವೆನೆಗಳನ್ನು ವಾಣಿಜ್ಯದ ಉದ್ದೇಶಕ್ಕೆ ಬಳಸುವವರ ಕೈಗೆ ಸೇರಬಾರದು. ಹೀಗಾಗಿ ಅದರ ನೋಂದಣಿಗೆ ಅವಕಾಶ ನೀಡಬಾರದು' ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಆಪರೇಷನ್‌ ಸಿಂಧೂರ ಹೆಸರಿನ ಟ್ರೇಡ್‌ ಮಾರ್ಕ್‌ಗಾಗಿ ಈಗಾಗಲೇ 5 ಮಂದಿ ಅರ್ಜಿ ಸಲ್ಲಿಸಿರುವಂತೆಯೇ 'ಸುಪ್ರೀಂ'ನಲ್ಲಿ ಈ ಮನವಿ ಸಲ್ಲಿಕೆಯಾಗಿರುವುದು ಮಹತ್ವ ಪಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries