ಬದಿಯಡ್ಕ: ರೋಟರಿ ಇಂಟರ್ನೇಶನಲ್ ಬದಿಯಡ್ಕ ಘಟಕದ ಕನಸಿನ ಮನೆ ಯೋಜನೆಯ ಮೂರನೇ ಮನೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯಿತಿಯ 12ನೇ ವಾರ್ಡು ಕೆಡೆಂಜಿ ನಿವಾಸಿ ಶೋಭ ಎಂಬವರಿಗೆ ನಿರ್ಮಿಸಿಕೊಡಲಾಗುತ್ತಿರುವ ಮನೆಗೆ ಅಧ್ಯಕ್ಷ ಕೇಶವ ಪಾಟಾಳಿ ನೇತೃತ್ವದಲ್ಲಿ ಶಿಲಾನ್ಯಾಸಗೈಯಲಾಯಿತು. ಕಾರ್ಯದರ್ಶಿ ರಮೇಶ್ ಆಳ್ವ ಕಡಾರು, ವೈ. ರಾಘವೇಂದ್ರ ಪ್ರಸಾದ್, ಜಗನ್ನಾಥ ರೈ, ಗೋಪಾಲಕೃಷ್ಣ ಕಾಮತ್, ಪಿ.ಎಸ್.ಸಂತೋಷ್ ಕುಮಾರ್ ಪಾಲ್ಗೊಂಡಿದ್ದರು.




.jpg)
