HEALTH TIPS

ನರೇಂದ್ರ ಮೋದಿ ಮನೆಯಂಗಳ ಬೆಳಗುತ್ತಿದೆ ʼಶಶಿʼಯ ಬೆಳದಿಂಗಳು ; ಬದಲಾಗುತ್ತಿದೆ ತರೂರ್‌ ಪೊಲಿಟಿಕಲ್‌ ತೇವರ್!‌

ನವದೆಹಲಿ: ಹೈಕಮಾಂಡ್ ಸಂಸ್ಕೃತಿಯನ್ನು ಹೊಂದಿರುವ ಕಾಂಗ್ರೆಸ್ಸಿನಲ್ಲಿ ಸಾಮಾನ್ಯವಾಗಿ ವರಿಷ್ಠರ ವಿರುದ್ದ ಮುಖಂಡರು ಮಾತನಾಡುವುದು ಕಮ್ಮಿ. ಇದು, ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ನಾಯಕರು ಪಾಲಿಸಿಕೊಂಡು ಬರುತ್ತಿರುವ ಅಲಿಖಿತ ನಿಯಮ. ಇದಕ್ಕೆ ವಿರುದ್ದವಾಗಿ ನಡೆದುಕೊಂಡವರೇ ಪಕ್ಷದ ತಿರುವನಂತಪುರಂ ಸಂಸದ ಶಶಿ ತರೂರ್.

ಸದ್ಯ, ತರೂರ್ ಲೈಮ್ ಲೈಟ್ ನಲ್ಲಿ ಇರಲು ಕಾರಣ, ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಕೆಲವೊಂದು ಕೆಲಸಗಳನ್ನು ಬಹಿರಂಗವಾಗಿ ಹೊಗಳುತ್ತಿರುವುದು. ಆಪರೇಷನ್ ಸಿಂಧೂರ್ ಭಾಗವಾಗಿ, ವಿದೇಶಕ್ಕೆ ಹೋಗುವ ನಿಯೋಗದ ತಂಡದ ನೇತೃತ್ವವನ್ನು ತರೂರ್ ವಹಿಸಿಕೊಂಡ ನಂತರವಂತೂ, ತರೂರ್ ಅವರನ್ನು 'ಮೋದಿಯ ಭಕ್ತ' ಎಂದೇ ವಿಶ್ಲೇಷಿಸಲಾಗುತ್ತಿದೆ. ಶಶಿ ತರೂರ್ ಅವರ ಇತ್ತೀಚಿನ ರಾಜಕೀಯ ನಡೆಯನ್ನು ಅವಲೋಕಿಸಿದಾಗ, ಅವರು ಕಾಂಗ್ರೆಸ್ ಪಾರ್ಟಿಯನ್ನು ತೊರೆಯಲು ಸಜ್ಜಾಗುತ್ತಿದ್ದಾರಾ ಅಥವಾ ಕಾಂಗ್ರೆಸ್ ಪಕ್ಷವೇ ಅಮಾನತು ಮಾಡಲಿ ಎಂದು ಕಾಯುತ್ತಿದ್ದಾರೋ ಎನ್ನುವಂತಿದೆ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಪಕ್ಷದ ತೀರ್ಮಾನವನ್ನು ಧಿಕ್ಕರಿಸಿ ವಿದೇಶಿ ನಿಯೋಗದ ನೇತೃತ್ವವನ್ನು ವಹಿಸಿಕೊಂಡ ನಂತರ, ಸಾಕಷ್ಟು ವಿರೋಧವನ್ನು ತರೂರ್ ಎದುರಿಸುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ಅವರು ಕ್ಯಾರ್ ಮಾಡುವ ರೀತಿಯಲ್ಲಿ ಕಾಣುತ್ತಿಲ್ಲ.

ಸ್ವಪಕ್ಷೀಯರಲ್ಲಿ ಬಹಳಷ್ಟು ಕಾಡುವ ಪ್ರಶ್ನೆ ತರೂರ್ ಯಾಕೆ ಹೀಗೆ

ಹಾಗಂತ, ಕಾಂಗ್ರೆಸ್ ಪಕ್ಷದ ಹೈಕಮಾಂಡ್, ತರೂರ್ ಅವರಿಗೆ ಸಾಕಷ್ಟು ಹುದ್ದೆ/ಸೌಲಭ್ಯವನ್ನು ನೀಡಿಲ್ಲ ಎಂದಲ್ಲಾ, ಬೇಕಾದಷ್ಟು ನೀಡಿತ್ತು. ಪಕ್ಷದ ಪ್ರಮುಖರು ಅಥವಾ ಗಾಂಧಿ ಕುಟುಂಬದ ಆಪ್ತರಿಗೆ ಸಿಗುವ ಸ್ಥಾನಮಾನ ಇವರಿಗೂ ಸಿಕ್ಕಿತ್ತು. ಕೇರಳ ಕಾಂಗ್ರೆಸ್ ಘಟಕದ ತೀವ್ರ ವಿರೋಧದ ನಡುವೆಯೂ, ಅವರಿಗೆ ತಿರುವನಂತಪುರಂ ಕ್ಷೇತ್ರದ ಟಿಕೆಟ್ ಅನ್ನು ಕೊಟ್ಟಿತ್ತು. ಆದರೂ, ತರೂರ್ ಯಾಕೆ ಹೀಗೆ ಎನ್ನುವ ಪ್ರಶ್ನೆ, ಸ್ವಪಕ್ಷೀಯರಲ್ಲಿ ಬಹಳಷ್ಟು ಕಾಡುವುದು ಸಹಜ.ಇಷ್ಟೇ ಅಲ್ಲ, ಶಶಿ ತರೂರ್ ಅವರಿಗೆ ರಾಜಕೀಯದ ಅನುಭವ ಅಷ್ಟಕಷ್ಟೇ ಇದ್ದ ಸಮಯ. ರಾಜತಾಂತ್ರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು ಹೊಂದಿದ್ದವರು. ಅವರು ದೇಶದ ಇತರ ಟಿಪಿಕಲ್ ರಾಜಕಾರಣಿ ಅಂತಲ್ಲ. ಅವರ ಜೀವನಶೈಲಿಯ ಬಗ್ಗೆಯೂ ಕಾಂಗ್ರೆಸ್ಸಿಗರು ವ್ಯಂಗ್ಯವಾಡಿದ್ದುಂಟು.

ಮನಮೋಹನ್ ಸಿಂಗ್ ಅವಧಿಯಲ್ಲಿ ಉತ್ತಮ ಜವಾಬ್ದಾರಿ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ (2006 ರಲ್ಲಿ) ಶಶಿ ತರೂರ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ಆದರೆ, ಅವರು ಅಲ್ಲಿ ಸೋಲು ಕಂಡಿದ್ದರು. ಇದರ ಬೆನ್ನಲ್ಲೇ, ಅವರನ್ನು ಕಾಂಗ್ರೆಸ್ ಪಾರ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. 2009ರ ಚುನಾವಣೆಯಲ್ಲಿ, ವರಿಷ್ಠರ ಸೂಚನೆಯ ಹಿನ್ನಲೆಯಲ್ಲಿ ಅವರಿಗೆ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ನೀಡಲಾಗಿತ್ತು. 2009- 2024ರ ಅವಧಿಯಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದದ್ದು ಅವರಿಗಿದ್ದ ಜನಪ್ರಿಯತೆಗೆ ಸಾಕ್ಷಿ ಮತ್ತು ಇದುವೇ ಕಾಂಗ್ರೆಸ್ ಪಾರ್ಟಿಯು ಅವರ ವಿರುದ್ದ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಎಂದು ವಿಶ್ಲೇಷಿಸಲಾಗುತ್ತಿದೆ. ಶಶಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಶಶಿ ತರೂರ್ ಸೋತಿದ್ದರು.

ಎಐಸಿಸಿ ಅಧ್ಯಕ್ಷರ ಅವಿರೋಧ ಆಯ್ಕೆ

ಎಐಸಿಸಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸೋನಿಯಾ ಮತ್ತು ರಾಹುಲ್ ಗಾಂಧಿ ಬಯಸಿದ್ದರು. ಆದರೆ, ಅದನ್ನು ಮೀರಿ ಶಶಿ ತರೂರ್ ಕಣದಲ್ಲಿ ಉಳಿದುಕೊಂಡರು. ಆದರೆ, ಹೈಕಮಾಂಡ್ ಸಂಸ್ಕೃತಿಯನ್ನು ಧಿಕ್ಕರಿಸಿ ನಡೆಯುವ ಅವರ ನಿರ್ಧಾರವನ್ನು ಕೆಲವರು ಒಳಗೊಳಗೆ ಸ್ವಾಗತಿಸಿದ್ದರು. ಆದರೂ, ಕಾಂಗ್ರೆಸ್ ಅವರಿಗೆ ಲೋಕಸಭಾ ಟಿಕೆಟ್ ( 2024) ಅನ್ನು ನೀಡಿತು. ಇದಕ್ಕೆ ಕಾರಣ, ಶಶಿ ತರೂರ್ ಅಲ್ಲದೇ ಬೇರೆಯವರು ತಿರುವನಂತಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೆ, ಬಿಜೆಪಿ ವಿರುದ್ದ ಸೋಲು ಕಟ್ಟಿಟ್ಟಬುತ್ತಿ ಎಂದು ವ್ಯಾಖ್ಯಾನಿಸಲಾಯಿತು.

ಶಶಿ ತರೂರ್ ಅವರಿಗೆ ಒಳ್ಳೆಯ ಸ್ಥಾನಮಾನ

ಶಶಿ ತರೂರ್ ಅವರಿಗೆ ಕಾಂಗ್ರೆಸ್ ಪಾರ್ಟಿಯು, ಪ್ರಮುಖವಾದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರು ಮತ್ತು ಮಾನವ ಸಂಪನ್ಮೂಲ ಖಾತೆಯಂತ ಪ್ರಮುಖ ಹುದ್ದೆಯನ್ನು ನೀಡಲಾಯಿತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲೂ ಅವರಿಗೆ ಸ್ಥಾನ ನೀಡಲಾಯಿತು. ಆದರೂ ಅವರ ಮಹತ್ವಾಕಾಂಕ್ಷೆ, ಹಠಮಾರಿತನದಿಂದಾಗಿ, ಪಕ್ಷದ ತೀರ್ಮಾನವನ್ನು ಹಲವು ಬಾರಿ ಧಿಕ್ಕರಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ಹೊಗಳಿದ್ದ ಮೋದಿ

ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಕ್ಕಾಗಿ ಶಶಿ ತರೂರ್ ಅವರಿಗೆ ಕಾಂಗ್ರೆಸ್ ವರಿಷ್ಠರು ಕ್ಲಾಸ್ ಕೊಟ್ಟಿದ್ದರು. ಕೂಡಲೇ, ಅವರನ್ನು ಎಐಸಿಸಿ ಕಾಂಗ್ರೆಸ್ ವಕ್ತಾರ ಸ್ಥಾನದಿಂದ ತೆಗೆದು ಹಾಕಲಾಯಿತು. ಸ್ವಚ್ಚ ಭಾರತ್ ಅಭಿಯಾನದ ಕಾರ್ಯಕ್ರಮವೊಂದರಲ್ಲಿ ಮೋದಿ, ತರೂರ್ ಅವರನ್ನು ಹೊಗಳಿದ್ದರು. ಇದು, ಕಾಂಗ್ರೆಸ್ ವರಿಷ್ಠರ ಕಣ್ಣನ್ನು ಇನ್ನಷ್ಟು ಕೆಂಪಾಗಿಸಿತು. ಕಾಂಗ್ರೆಸ್ ನಾಯಕರು ತರೂರ್, ಬಿಜೆಪಿ ಕಡೆ ವಾಲುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಲು ಆರಂಭಿಸಿದರು. ಪಾಕಿಸ್ತಾನದ ವಿರುದ್ದ ವಿದೇಶಕ್ಕೆ ಹೋಗುವ ನಿಯೋಗದ ನೇತೃತ್ವಪಾಕಿಸ್ತಾನದ ವಿರುದ್ದ ವಿದೇಶಕ್ಕೆ ಹೋಗುವ ನಿಯೋಗ ಒಂದಕ್ಕೆ ಕೇಂದ್ರ ಸರ್ಕಾರ ಇವರನ್ನು ನಾಯಕರನ್ನಾಗಿ ಮಾಡಲಾಯಿತು. ಅಸಲಿಗೆ, ಕಾಂಗ್ರೆಸ್ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಇವರು ಇರಲಿಲ್ಲ. ಆದರೆ, ಪಟ್ಟಿಯಿಂದ ಸರ್ಕಾರ ಅವರ ಹೆಸರನ್ನು ತೆಗೆಯಲು ಹೋಗಲಿಲ್ಲ. ಕಾಂಗ್ರೆಸ್ ವರಿಷ್ಠರು ಸೂಚಿಸಿದ ಆದೇಶವನ್ನು ತರೂರ್ ಪಾಲಿಸಲು ಹೋಗಲಿಲ್ಲ. ಹಾಗಾಗಿ, ಶಶಿ ತರೂರ್ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ, ಕಾಂಗ್ರೆಸ್ಸಿನಿಂದ ದೂರುವಾಗುತ್ತಿದ್ದಾರೆ, ಮೋದಿಯ ಕಡೆ ಸ್ಪಷ್ಟವಾಗಿ ವಾಲುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries