HEALTH TIPS

ಪಶ್ಚಿಮ ಬಂಗಾಳ ವಿಧಾನಸಭೆ: ಬಿಜೆಪಿಯ ನಾಲ್ವರು ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

ಕೊಲ್ಕತ್ತ: ಬಿಜೆಪಿ ಮುಖ್ಯ ಸಚೇತಕ ಶಂಕರ್‌ ಘೋಷ್‌ ಸೇರಿದಂತೆ ನಾಲ್ವರು ಶಾಸಕರನ್ನು ಅಮಾನತುಗೊಳಿಸಿದ ಘಟನೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ಸಾಕ್ಷಿಯಾಯಿತು.

ಹೆಸರಾಂತ ಆರ್ಥಿಕ ತಜ್ಞರೂ ಆಗಿರುವ ಶಾಸಕ ಅಶೋಕ ಲಿಹ್ರಿ ಅವರನ್ನೂ ಒಳಗೊಂಡು ಪಕ್ಷದ ಶಾಸಕ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಿರುವುದನ್ನು ಖಂಡಿಸಿ ಶಂಕರ್ ಘೋಷ್ ನೇತೃತ್ವದಲ್ಲಿ ಬಿಜೆಪಿಯ 40 ಶಾಸಕರು ಪ್ರತಿಭಟನೆ ನಡೆಸಿದರು

ಇಂದು ಸದನ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಮುಂದುವರಿಸಿ ಘೋಷಣೆಗಳನ್ನು ಕೂಗಲಾರಂಭಿಸಿದ ಬಿಜೆಪಿ ಶಾಸಕರು, ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಸ್ಪೀಕರ್‌ ಬಿಮನ್‌ ಬಂಡೋಪಾಧ್ಯಾಯ ಅವರು ಶಾಸಕರು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಪ್ರತಿಭಟನಾನಿರತರು ಸ್ಪೀಕರ್‌ ಮಾತಿಗೆ ಸೊಪ್ಪುಹಾಕಲಿಲ್ಲ.

ಹೀಗಾಗಿ, ಬಂಡೋಪಾಧ್ಯಾಯ ಅವರು ನಾಲ್ವರು ಶಾಸಕರನ್ನು ಪ್ರಸ್ತುತ ಅಧಿವೇಶನದಿಂದ ಅಮಾನತು ಮಾಡಿ ಆದೇಶಿಸಿದರು.

ಸದನಕ್ಕೆ ಅಡ್ಡಿಪಡಿಸಿದ ಹಾಗೂ ಸ್ಪೀಕರ್‌ ಅವರಿಗೆ ಅಗೌರವ ತೋರಿದ ಆರೋಪದಲ್ಲಿ ಶಂಕರ್‌ ಘೋಷ್‌, ಅಗ್ನಿಮಿತ್ರ ಪೌಲ್‌, ದೀಪಕ್‌ ಬರ್ಮನ್‌ ಹಾಗೂ ಮನೋಜ್‌ ಒರಾನ್‌ ಅವರು ಅಮಾನತಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries