ಕಾಸರಗೋಡು: ಶಾಲಾ ಪ್ರವೇಶೋತ್ಸವ ಸಮಾರಂಭದ ಜೊತೆಗೆ ರಾಜ್ಯದ ಶಾಲೆಗಳನ್ನು ಹಾಗೂ ಶಾಲಾ ವಠಾರ ತಪಾಸಣೆ ನಡೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ 'ಸರ್ಪಾ ಸ್ವಯಂಸೇವಕರ'ತಂಡ ಸನ್ನದ್ಧವಾಗಿದೆ. ಕಳೆದ ಒಂದು ವಾರದಿಂದ ತಪಾಸಣೆ ನಡೆಸಿಕೊಮಡು ಬರಲಾಗುತ್ತಿದ್ದು, ಈ ವಾರವೂ ಮುಂದುವರಿಯಲಿದೆ.
ಶಾಲಾ ಅಧಿಕಾರಿಗಳು ಅಥವಾ ಪಿಟಿಎ ಅಧಿಕಾರಿಗಳ ಕೇಳಿಕೆ ಮೇರೆಗೆ ಶಾಲೆಗಳಲ್ಲಿ ಮತ್ತು ಸುತ್ತಮುತ್ತ ವಿಷಪೂರಿತ ಹಾವುಗಳ ಉಪಸ್ಥಿತಿಯನ್ನು ನಿವಾರಿಸುವ ಮೂಲಕ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುವುದು ತಪಾಸಣೆಯ ಗುರಿಯಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರ ಹಗೂ ಸಿಬ್ಬಂದಿಯ ಸುರಕ್ಷತೆಗಾಗಿ ಅರಣ್ಯ ಇಲಾಖೆ ಒದಗಿಸುವ ಪ್ರಮುಖ ಸೇವೆ ಇದಾಗಿದೆ ಎಂದು ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಈಗಾಘಲೇ ಸ್ಪಷ್ಟಪಡಿಸಿದ್ದರೆ.
ಪ್ರತಿ ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಪಾಸಣಾ ಚಟುವಟಿಕೆ ಆಯೋಜಿಸುವಂತೆ ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ. ಕೃಷ್ಣನ್ ನಿರ್ದೇಶನ ನೀಡಿದ್ದಾರೆ. 'ಸರ್ಪ ಸ್ವಯಂಸೇವಕರ' ಸಹಾಯದ ಅಗತ್ಯವಿರುವ ಶಾಲಾ ಅಧಿಕಾರಿಗಳು ಆಯಾ ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು. ಸಹಾಯ ಮತ್ತು ವಿಚಾರಣೆಗಾಗಿ ಅರಣ್ಯ ಇಲಾಖೆಯ ಟೋಲ್-ಫ್ರೀ ಸಂಖ್ಯೆ(1800 425 4733)ಗೆ ಕರೆ ಮಾಡಬಹುದು.
ಈ ಬಗ್ಗೆ ಮಾಃಇತಿಗಾಗಿ ಸಾಮಾಜಿಕ ಅರಣ್ಯ ವಿಭಾಗದ ಮೊಬೈಲ್ ಸಂಕ್ಯೆ(9447979152)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.






