ಬದಿಯಡ್ಕ: ಜೂನ್ 7 ರಂದು ವಿಯೆಟ್ನಾಂ ದೇಶದ ಪೋಚಿಮಿನ್ ನಗರದಲ್ಲಿ ನಡೆದ 2 ಎರಡನೇ ಅಂತರರಾಷ್ಟ್ರೀಯ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧೆಯ ಸೀನಿಯರ್ ಮಹಿಳೆಯರ ವಿಭಾಗದಲ್ಲಿ ಪುತ್ತೂರಿನ ಸಂಧ್ಯಾ ಯನ್ ಭಟ್ ಅವರು ವಿಯೆಟ್ನಾಂ, ಆಸ್ಟ್ರೇಲಿಯಾ, ಕೊಂಬೋಡಿಯ ಹಾಗೂ ಭಾರತ ತಂಡಗಳ ನಡುವೆ ನಡೆದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಇದೇ ಸಂದರ್ಭದಲ್ಲಿ ಆಡಿ ವಿಪ್ರ ಪಾಂಡೆ ಕನ್ಸಲ್ಟೆಂಟ್ ಜನರಲ್ ಆಫ್ ಇಂಡಿಯಾ ಇವರ ಸಮ್ಮುಖದಲ್ಲಿ ವಿಯಟ್ನಾಂನ ವಿ ಯೋಗ ವಲ್ರ್ಡ್ ಸಂಸ್ಥೆಯ ಮುಖ್ಯಸ್ಥ ಯೋಗಾಚಾರ್ಯ ವಿಶ್ವನಾಥ್ ಕುಲಕರ್ಣಿ ಹಾಗೂ ಭಾರತದ ಅವಿಯ ಸಂಸ್ಥೆಯ ಮುಖ್ಯಸ್ಥ ಯೋಗಾಚಾರ್ಯ ತೀರ್ಥರಾಜ್ ಹೋಲೂರ್ ರವರು ಸಂಧ್ಯಾ ಯನ್ ಭಟ್ ರವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ 'ಯೋಗ ಶಿಕ್ಷಕಿ' ಹಾಗೂ ಅಂತರಾಷ್ಟ್ರೀಯ 'ಯೋಗರತ್ನ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಸಂಧ್ಯಾ ಯನ್ ಭಟ್ ಅವರು ಪುತ್ತೂರಿನ ರಾಜಕೀಯ ಭೀಷ್ಮ ದಿ. ಉರಿಮಜಲು ರಾಮ ಭಟ್ ಮತ್ತು ಸವಿತಾ ಭಟ್ ಅವರ ಸುಪುತ್ರಿ ಮತ್ತು ಪಟ್ಣಡ್ಕ ನಾರಾಯಣ ಭಟ್ಟರ ಪತ್ನಿಯಾಗಿದ್ದಾರೆ.

-%20Sandhya.jpg)
