HEALTH TIPS

ಕುರುಡಪದವು ರಸ್ತೆ-ಮರಬಿದ್ದು ಸಂಚಾರ ವ್ಯತ್ಯಯ-ಬಂಬ್ರಾಣ, ಉಳುವಾರಿನಿಂದ ಹಲವು ಕುಟುಂಬಗಳ ಸ್ಥಳಾಂತರ:

ಉಪ್ಪಳ: ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಚಿಪ್ಪಾರು ಕಡೆಂಕೋಡಿಯಲ್ಲಿ ರಸ್ತೆಗೆ ಮರ ಮುರಿದು ಬಿದ್ದು ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಂಗಳವಾರ ಬೆಳಿಗ್ಗೆ ರಸ್ತೆ ಬದಿಯ ಮರ ತುಂಡಾಗಿ ವಿದ್ಯುತ್ ತಂತಿ ಮೇಲೆ ಸಿಲುಕಿ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದ ಉಪ್ಪಳ-ಲಾಲ್‍ಬಾಗ್-ಕುರುಡಪದವು ರೂಟ್‍ನಲ್ಲಿ ಬಸ್ ಸಂಚಾರ ಮೊಟಕುಗೊಂಡಿತು. ಸಣ್ಣ ವಾಹನಗಳು ಸಂಚರಿಸುತ್ತಿದ್ದವು.

ಮರ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ತರೆವುಗೊಳಿಸಲು ವಿಳಂಬವಾಗಿದೆ. ವಿದ್ಯುತ್ ಕಚೇರಿಯಿಂದ ನೌಕರರು ತಲುಪಿ ಮರವನ್ನು ಅಪರಾಹ್ನ ತೆರವುಗೊಳಿಸಿದರು. ಬಳಿಕ ಸಂಚಾರ ಪುನರಾರಂಭಗೊಂಡಿತು. 

ಬಂಬ್ರಾಣ, ಉಳುವಾರಿನಿಂದ ಹಲವು ಕುಟುಂಬಗಳ ಸ್ಥಳಾಂತರ:

ಕುಂಬಳೆ: ಉಳುವಾರು, ಬಂಬ್ರಾಣ ಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಈ ಪ್ರದೇಶಗಳಿಂದ ಹಲವು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಳುವಾರಿನಿಂದ 15 ಕುಟುಂಬಗಳನ್ನು, ಬಂಬ್ರಾಣ ಬಯಲು ಪ್ರದೇಶದಿಂದ 10 ಕುಟುಂಬಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ತೀವ್ರಗೊಂಡರೆ ಇನ್ನಷ್ಟು ಕುಟುಂಬಗಳನ್ನು ತೆರವುಗೊಳಿಸಬೇಕಾಗಿ ಬರಲಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries